ಶಿಕ್ಷಣ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ – ಪಲ್ಲವಿ.ಜಿ
ನರೇಗಲ್ ಡಿ .08

ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಬಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಅವರು ಶನಿವಾರ ಸಂಜೆ ನರೇಗಲ್ ಬೊಡೋಜರ ನಗರದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯ ವಾಸಿಸುವ ಕುಟುಂಬಗಳ ಸ್ಥಳ ವೀಕ್ಷಿಸಿ ಕುಂದು ಕೊರತೆ ಸಭೆ ನಡೆಸಿದರು.

ಅಲೆಮಾರಿ ಸಮುದಾಯಕ್ಕೆ ದಂಟಿಚೋರ ಬುಡದ ಜಂಗಮ ಮುಂತಾದವರು ವಾಸಿಸುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ ಅವರು ನಿವೇಶನ ರಹಿತ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದವರಿಗೆ ನಿವೇಶನ ಒದಗಿಸಲು ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲು ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಿದರು. ಅಲೆಮಾರಿ ಜನಾಂಗದವರಿಗೆ ವಾಸಿಸಲು ಮನೆ ರಸ್ತೆ ನೀರಿನ ಸೌಲಭ್ಯ ಆರೋಗ್ಯದ ಕಡೆ ಗಮನ ಹರಿಸಲು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದರು. ಅಲೆಮಾರಿ ಜನಾಂಗಗಳಿಗೆ ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಯಾವುದಾದರೂ ಸಮಸ್ಯೆಗಳಿದ್ದರೆ ಬೇಗನೆ ಬಗೆಹರಿಸಿರಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್ ಅನಂತ್ ಕುಮಾರ್ ರೋಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರ್ತಿ ಹಾಗೂ ಗೀತಾ ಆಲೂರು ಮೇಡಂ ಗಜೇಂದ್ರಗಡ ತಾಲೂಕ ಪಂಚಾಯತಿ ಅಧಿಕಾರಿ ರವೀಂದ್ರ ಬಡಿಗೇರ್ ನರೇಗಲ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ನಿಡಶೇಸಿ ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಶಾಮಣ್ಣ ಹನುಮಸಾಗರ ಬಾಷಸಾಬ ಹೂಲಗೇರಿ ನಾಗೇಶ್ ಮಣವಡರ ಅಲೆಮಾರಿ ಜನರು ಮುಖಂಡರಾದ. ಟಗರಪ ಕಟ್ಟಿಮನಿ ದುರಗಪ ಪೂಜಾರ ಹುಶೆನಪ ಕಟ್ಟಿಮನಿ ದುರಗಪ ಬಮನಾಳ ಯಳವಪ ಕಟ್ಟಿಮನಿ ಸಣ್ಣ ನಾಗಪ್ಪ ಅನೇಕರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ