ಬಿಸಿಲಿನ ತಾಪವನ್ನು ತಣಿಸಲು ನೀರಿನ ಅರವಟ್ಟಿಗೆ ಸೌಕರ್ಯ ಕಲ್ಪಿಸಿದ್ದು ಶ್ಲಾಘನೀಯ – ಗಚ್ಚಿನಮಠ.
ಹುನಗುಂದ ಮಾರ್ಚ್.3

ಫೆಬ್ರುವರಿ ಮಧ್ಯ ವಾರ ದಿಂದಲೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಭಯಂಕರ ಬಿಸಿಲಿನ ತಾಪಕ್ಕೆ ಅಲ್ಪ ಸ್ವಲ್ಪ ಅಂಜರ್ತಲದ ಮಟ್ಟವೂ ಕುಸಿಯುತ್ತಾ ಹೋಗುತ್ತಿದ್ದು. ಇದರಿಂದ ಮನುಷ್ಯ, ಪ್ರಾಣಿ-ಪಕ್ಷಿ ಜೀವ, ಸಂಕುಲಗಳು ಹನಿ ನೀರಿಗಾಗಿ ತಾತ್ವರ ಪಡುವ ಸ್ಥಿತಿ ನಿರ್ಮಾಣವಾಗುವ ಸ್ಥಿತಿ ಬಂದೊದಗಿದೆ ಎಂದು ಹುನಗುಂದದ ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ಹೇಳಿದರು. ಪಟ್ಟಣದ ಶಿವಬಸವ ಗುಡಿ ಹತ್ತಿರ ಇಲಕಲ್ಲ ಕುಟುಂಬ ದಿಂದ ಪಶು-ಪಕ್ಷಿಗಳಿಗೆ ನೀರಿನ ದಾಹ ತಣಿಸಲು ನೀರಿನ ಸಂಗ್ರಹಣ ತೊಟ್ಟಿಯ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಡೀ ವರ್ಷದಾದ್ಯಂತ ಮಳೆಗಾಳಿ ಇಲ್ಲದೇ ಬರ ಆವರಿಸಿ ಕೊಂಡಿದೆ.ನದಿ,ಹಳ್ಳ-ಕೊಳ್ಳ, ಕೆರೆ-ಕಟ್ಟೆ, ಕೊಳವೆ ಭಾವಿಗಳೆಲ್ಲ ಒಣಗಿ ನೀರಿಲ್ಲದೇ ಬರಡಾಗಿವೆ. ಪ್ರಸ್ತುತ ಪಟ್ಟಣದಲ್ಲಿ ಮನುಷ್ಯರಿಗೆ ೩ ದಿನಕ್ಕೊಮ್ಮೆ ನೀರಿನ ಸೌಲಭ್ಯ ಪಡೆಯುವ ಪರಸ್ಥಿತಿಯ ಇದ್ದು. ಅಂತಹದರಲ್ಲಿ ಬಾಯಿ ಇಲ್ಲದೇ ಮೂಕಪ್ರಾಣಿಗಳ ಗತಿ ಹೇಳ ತೀರದು. ಮೂಕ ಪ್ರಾಣಿಗಳ ಅಂತಕರಣವುಳ್ಳ ಇಲಕಲ್ಲ ಕುಟುಂಬ ಪರಿವಾರದವರು ಅರವಟ್ಟಿಗೆಯನ್ನು ಮಾಡಿದ್ದು ನಿಜಕ್ಕೂ ಶ್ಲಾಘನೀಯವಾದುದು.ಇಂತಹ ಬರಗಾಲದ ಸಮಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಇಂತಹ ನೀರಿನತೊಟ್ಟೆ ನಿರ್ಮಾಣವಾಗಬೇಕು.ರಾಸುಗಳ ಹಸಿವನ್ನು ನೀಗಿಸಲು ಮೇವಿನ ಸೌಲಭ್ಯ ಕಲ್ಪಿಸಲು ಮುಂದಾಗ ಬೇಕೆಂದರು. ಮುಖಂಡ ಮಾಹಾಂತೇಶ ತೆಗ್ಗಿನಮಠ ಮಾತನಾಡಿ ಆಕಸ್ಮಿಕ ಹುಟ್ಟು ಶಾಶ್ವತ ಸಾವು ಮಧ್ಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ಪ್ರಾಣಿ ಪಕ್ಷಿ, ಜೀವ, ಸಂಕುಲ ವೃದ್ದಿಗೆ ಬೇಕಾಗುವ ಅವಶ್ಯಕತೆಗಳನ್ನು ನಾವು ಒದಗಿಸಿದಾಗ ಮಾತ್ರ ನಿಸರ್ಗ ರಕ್ಷಣೆ ಯಾಗುತ್ತದೆ. ಈ ಕುರಿತು ಬೇಸಿಗೆಯಲ್ಲಿ ನೀರು ಹಾಳಾಗದಂತೆ ಸದ್ಭಳಕೆ ಮಾಡಿಕೊಂಡು ಪ್ರತಿಯೊಬ್ಬರು ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೆ ನೀರು ಸಂಗ್ರಹಿಸಿಡಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಶಂಕ್ರಪ್ಪ ಪೈಲ,ಜೈನುಸಾಬ ಹಗೇದಾಳ,ಮಹಾಂತೇಶ ತೆಗ್ಗಿನಮಠ,ಸುರೇಶ ಹಳಪೇಟಿ, ನಾರಾಯಣ ಕುರಕುಂಟಿ,ಮಲ್ಲಣ್ಣ ಲೆಕ್ಕಿಹಾಳ,ಸುರೇಶ ಅಂಗಡಿ,ರಾಜು ತೆನಹಳ್ಳಿ,ಶಿವಾನಂದ ಕಂಠಿ, ಚನ್ನಪ್ಪ ಬಾದವಾಡಗಿ,ಈರಣ್ಣ ಅಂಗಡಿ ಸೇರಿದಂತೆ ಅನೇಕರು ಇದ್ದರು.***ಬಾಕ್ಸ್ ಸುದ್ದಿ****ಬಿಸಿಲಿನ ತಾಪ ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿ ಸಂಕೂಲಕ್ಕೂ ಸಂಕಟ ತಂದೊಡುತ್ತಿದೆ. ಅವುಗಳ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನಮ್ಮ ಮನೆ ಮೇಲೆ, ಅಕ್ಕಪಕ್ಕದಲ್ಲಿ ನೀರು, ಆಹಾರ ಇಟ್ಟು ಅವುಗಳನ್ನು ಉಳಿಸುವ ಕೆಲಸ ಮಾಡಬೇಕು ಗಂಗಣ್ಣ ಇಲಕಲ್ ಹುನಗುಂದ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ