ಗಣಿತ ಮಾದರಿ ಪ್ರದರ್ಶನ ಹಾಗೂ ಮಾರಾಟ ಮೇಳ ಕಾರ್ಯಕ್ರಮ.

ನಾದ ಕೆಡಿ ಡಿಸೆಂಬರ್.28

ಇಂಡಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ನಾದ ಕೆಡಿ ಶಾಲೆಯಲ್ಲಿ ಶ್ರೀನಿವಾಸ್ ರಾಮಾನುಜ ಜಯಂತಿ ನಿಮಿತ್ತ ವಾಗಿ ಗಣಿತ ಸಂಘ ದಡಿಯಲ್ಲಿ ಗಣಿತ ಮಾದರಿ ಪ್ರದರ್ಶನ ಹಾಗೂ ಮಾರಾಟ ಮೇಳ ಜರುಗಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾನ್ಯಟಿ ಎಸ್ ಆಲಗೂರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಣಿತ ವಿಷಯ ಎಲ್ಲಾ ವಿಷಯಗಳ ತಂದೆಯಿದ್ದಂತೆ ಕಬ್ಬಿಣದ ಕಡಲೆಯ ಎನಿಸಿದರು ತಿಳಿದು ಕಲಿತರೆ ತುಂಬಾ ಸರಳವಾಗುತ್ತದೆ ಹೆಚ್ಚು ಅಂಕಗಳಿಸಲು ಸತತ ಅಭ್ಯಾಸ ಮಾಡಬೇಕು ಅಷ್ಟೆ ಈ ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಗುರುಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ತಾಲೂಕಿನಲ್ಲಿ ಒಂದು ಒಳ್ಳೆಯ ಪ್ರೌಢ ಶಾಲೆ ಆಗಿದೆ ಎಂದು ಸಂತೋಷ ವ್ಯಕ್ತ ಪಡಿಸಿದರು. ಎಸ್ ಎಸ್ ಮಠಪತಿಯವರು ಮಾತನಾಡಿ ಗಣಿತ ದಿನನಿತ್ಯ ಜೀವನದಲ್ಲಿ ವ್ಯವಹಾರ ಮಾಡಲು ಅತಿ ಅವಶ್ಯಕ ಇವತ್ತು ಈ ಶಾಲೆಯಲ್ಲಿ ಮಾರಾಟ ಮೇಳ ಮಾಡಿ ಮಕ್ಕಳಿಗೆ ವ್ಯವಹಾರ ಜ್ಞಾನ ಮೂಡಿಸುತ್ತಿರುವುದು ಅತ್ಯಂತ ಅರ್ಥ ಪೂರ್ಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕೆ ಡಿ ಕಟಗಿಘಾಣ ಅವರು ಮಾತನಾಡಿ ಶ್ರೀನಿವಾಸ ರಾಮಾನುಜನ್ ಅವರು ಬಾಲಕ ನಾಗಿದ್ದಾಗಲೇ ಅತ್ಯಂತ ಜಾಣ ವಿದ್ಯಾರ್ಥಿ ಗಣಿತದಲ್ಲಿ ಶಿಕ್ಷಕರು ಲೆಕ್ಕ ಬಿಡಿಸುವ ಮುನ್ನವೇ ಉತ್ತರ ಹೇಳುತ್ತಿದ್ದ ಮುಂದೆ ಗಣಿತ ವಿಷಯದಲ್ಲಿ ಹಲವಾರು ಸೂತ್ರ ಕಂಡು ಹಿಡಿದು ಗಣಿತ ತಜ್ಙ ಎನಿಸಿ ಕೊಂಡರು. ಕಾರ್ಯಕ್ರಮ ಮುಂದೆ ನಂತರ ಮಕ್ಕಳು ಗಣಿತ ಮಾದರಿ ಪ್ರದರ್ಶನ ಮಾಡಿದರು ಮೂವತ್ತಕ್ಕೂ ಮಕ್ಕಳು ವಿವಿಧ ರೀತಿಯ ತಿನಿಸು ತಿಂಡಿ ಮನೆಯಲ್ಲಿ ತಯಾರು ಮಾಡಿ ಮಾರಾಟ ಮೇಳದಲ್ಲಿ ಮಾರಾಟ ಕಿಟ್ಟಿದ್ದರು ಶಾಲೆಯ ವಿವಿಧ ತರಗತಿಯ ಮಕ್ಕಳು ಶಿಕ್ಷಕರು ಹಣ ಕೊಟ್ಟು ಕೊಂಡು ಮಾರಾಟ ಮೇಳದಲ್ಲಿ ಬಂದ ಲಾಭವನ್ನು ಪಡೆದು ಖುಷಿಪಟ್ಟರು ಕಾರ್ಯ ಕ್ರಮದಲ್ಲಿ ಸಿದರಾಯ ಶ ಐರೊಡಗಿ ಅಧ್ಯಕ್ಷರು ಗ್ರಾಮ ಪಂಚಾಯತ್ ನಾದ ಕೆಡಿ ಶಾಲಾ ಮುಖ್ಯೋಪಾಧ್ಯಾಯ ಸಿ ಎಂ ಬಂಡಗರ ಶ್ರೀ ದಿಲೀಪ್ ಪತ್ತಾರ ಗ್ರಾಮ ಪಂಚಾಯತ್ ಸದಸ್ಯರು ಕಾರ್ಯಕ್ರಮ ಸಂಯೋಜಕರು ಗಣಿತ ಶಿಕ್ಷಕಿ ಶ್ರೀಮತಿ ರೇಣುಕಾ ನಾಗಠಾಣ ಶ್ರೀಮತಿ ಅನಿತಾ ಅಳಗುಂಡಗಿ ಭಾಗವಹಿಸಿದ್ದರು ಎ ಬಿ ಗುಗದಡ್ಡಿ ಸ್ವಾಗತಿಸಿದರು ಸಂಗನಗೌಡ ಹಚಡದ ದೈಹಿಕ ಶಿಕ್ಷಣ ಶಿಕ್ಷಕ ನಿರೂಪಿಸಿದರು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button