ಅಪರಾಧಗಳ ತಡೆಗೆ ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸಿ – ಪಿಎಸ್ಐ ಗೀತಾಂಜಲಿ ಸಿಂಧೆ.

ಕೊಟ್ಟೂರು ಡಿಸೆಂಬರ್.27

ಪೋಲಿಸರು ಜನ ಸ್ನೇಹಿಗಳಾಗಿ ಜನರ ಪ್ರಾಣ,ಆಸ್ತಿ- ಪಾಸ್ತಿಗಳ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದು, ಅಪರಾಧಗಳ ತಡೆಗೆ ಪೋಲಿಸರಿಗೆ ಸಹಕರಿಸ ಬೇಕು ಎಂದು ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.   ಅಪರಾಧ ತೆಡ ಮಾಸಾ ಚರಣೆ ಪ್ರಯುಕ್ತ ಪಟ್ಟಣದ ಶಾಲೆ,ಕಾಲೇಜ್ ಮತ್ತು ಬಸ್ ನಿಲ್ದಾಣ ಹಾಗೂ ಸಂತೆ ಮಾರ್ಕೆಟ್ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಧ್ವನಿ ವರ್ಧಕ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ,ಅಪರಾಧಗಳನ್ನು ತಡೆ ಗಟ್ಟುವಲ್ಲಿ ಸಾರ್ವಜನಿಕರು ಸಹಕರಿಸ ಬೇಕೆಂದು ಕೋರಿದರು.ಯುವ ಪೀಳಿಗೆಯು ಮೋಜು ಮಸ್ತಿಗೆ ಬಿದ್ದು, ಕಾನೂನು ಪರಿ ಪಾಲನೆ ಪಾಲಿಸದೆ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿ ಕೊಳ್ಳದಿರಲು ಸೂಚಿಸಿದರು ಹಾಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳದೆ ಮಕ್ಕಳ ಚಲನ ವಲನಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರ,ಸರಗಳ್ಳರ ಹಾಗೂ ಮೊಬೈಲ್ ಕಳ್ಳರಿರುವುದು ಮತ್ತು ತಮ್ಮನ್ನು ಬೇರೆಡೆ ಗಮನ ಸೆಳೆದು ಹಣದ ಬ್ಯಾಗ್ ದೋಚುವಂತದ್ದು , ಎಟಿಎಂ ಕಾರ್ಡ್ ಸೀಕ್ರೆಟ್ ನಂಬರ್ ಪಿನ್ ಕೋಡ್ ಹ್ಯಾಕರ್ ಇದ್ದು ಈ ಬಗ್ಗೆ  ಎಚ್ಚರ ವಹಿಸಬೇಕು ಎಂದರು.ಮಹಿಳೆಯರು ಆಭರಣಗಳನ್ನು ಹೊರಗಡೆ ಕಾಣುವಂತೆ ಧರಿಸಿ ವಾಯು ವಿಹಾರಕ್ಕೆ ತೆರಳಬೇಡಿ,4-5 ದಿನಗಳು ಊರಿಗೆ ಹೋದರೆ ಮನೆಯಲ್ಲಿನ ಆಭರಣಗಳನ್ನು ಮತ್ತು ಹಣವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟು ಹೋಗ ತಕ್ಕದ್ದು ಹಾಗೆ ಬೈಕ್ ಗಳನ್ನು  ಬಿಟ್ಟು ಹೋಗುವಾಗ ಹ್ಯಾಂಡ್ ಲಾಕ್ ಮಾಡಿ ಹೋಗ ತಕ್ಕದ್ದು ಎಂದು ಈಗೆ ಸುಮಾರು 12 ಜಾಗೃತಿ ಮಾಹಿತಿಗಳನ್ನು ತಿಳಿಸಿದರು.ಅಪರಾಧ ತಡೆ ಗಟ್ಟುವಲ್ಲಿ ಸಾರ್ವಜನಿಕರು  ಪೋಲಿಸ್ ರೊಂದಿಗೆ ಕೈ ಜೋಡಿಸಿ, ಏನೇ ಅಪರಾಧ ಸಮಸ್ಯೆ ಇದ್ದರು 24×7 ಕಾರ್ಯ ನಿರತವಾಗಿರುವ ಪೋಲಿಸ್ ವಾಹನಕ್ಕೆ 112 ಗೆ ಕರೆ ಮಾಡಿ ರಕ್ಷಣೆ ಪಡೆದು ಕೊಳ್ಳಿ ಹಾಗೆ ಅಪರಾಧ ತಡೆಯಿರಿ ಎಂದು ಹೇಳಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button