ಮುದ್ದಂಗುಡ್ಡಿ‌ ಗ್ರಾಮದ ಶಿವನಗೌಡಗೆ ಗಲ್ಲು ಶಿಕ್ಷೆ – ವಿಧಿಸಲು ಆಗ್ರಹ.

ಮುದ್ದಂಗುಡ್ಡಿ ಫೆ.06

ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಗ್ರಾಮದ ಪುಟ್ಟ ಕಂದಮ್ಮಳ ಮೇಲೆ ಶಿವನಗೌಡ ಎಂಬ ವ್ಯಕ್ತಿ ಅತ್ಯಾಚಾರ ಎಸಗಿದ್ದು ಅಮಾನವೀಯ ಘಟನೆ ಕೂಡಲೆ ರಾಜ್ಯ ಸರಕಾರ ಶಿವನಗೌಡನಿಗೆ ಗಲ್ಲು ಶಿಕ್ಷೆ ವಿಧಿಸ ಬೇಕೆಂದು ಕರ್ನಾಟಕ ರಾಜ್ಯ ಬೇಡರ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮಾನ್ವಿ ತಾಲೂಕಿನ ಮುದ್ದುಂಗುಡ್ಡಿ ಗ್ರಾಮದ ಪುಟ್ಟ ಕಂದಮ್ಮ ಪೋತ್ನಾಳ ಗ್ರಾಮದ ರಾಜು ತಾಳಿಕೋಟಿ ಅವರ ವಿದ್ಯಾಭಾರತಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿದ್ದಳು, ಆದರೆ ಆಡಳಿತ ಮಂಡಳಿಯ ದುರಾಡಳಿತದಿಂದ ಈ ಘಟನೆ ಸಂಭವಿಸಿದ್ದು ಶಾಲಾ ಪರವಾನಗಿ ರದ್ದು ಮಾಡಬೇಕೆಂದು ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಗುಡುಗಿದರು.

ಪೋತ್ನಾಳ ಗ್ರಾಮದಲ್ಲಿರುವ ವಿದ್ಯಾಭಾರತಿ ಶಾಲೆಯ ಸಿಬ್ಬಂದಿ ಯಿಂದ ಅತ್ಯಾಚಾರ ಕ್ಕೊಳಗಾದ ಪುಟ್ಟ ಕಂದಮ್ಮಳಿಗೆ ಸಂಬಂಧಿಕ ರಲ್ಲದಿದ್ದರೂ ಶಿವನಗೌಡ ರೊಂದಿಗೆ ಬೈಕ್ ನಲ್ಲಿ ಕಳಿಸಿದ್ದರಿಂದ ಈ ಅವಘಡ ಸಂಭವಿಸಿದ್ದು, ಕೂಡಲೆ ಸರಕಾರ ಎಚ್ಚೆತ್ತು ಕೊಂಡು ಕೂಡಲೇ ಗಲ್ಲಿಗೇರಿಸ ಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button