ಯಡ್ಡಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿವ ಭರವಸೆ ವ್ಯಕ್ತಪಡಿಸಿದ ಹರಪನಹಳ್ಳಿ ಶಾಸಕಿ ಮಾನ್ಯ ಲತಾ ಮಲ್ಲಿಕಾರ್ಜುನ್.

ಯಡ್ಡಿಹಳ್ಳಿ ಸಪ್ಟೆಂಬರ್.4

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯೆಡ್ಡಿಹಳ್ಳಿ ಗ್ರಾಮದ ಕ್ಯಾಂಪಿನಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ನಾವು ನಿನ್ನೆ ಕೈಗೆತ್ತಿಕೊಂಡಂತ ಹೋರಾಟಕ್ಕೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಜನಪ್ರಿಯ ಶಾಸಕರು ಮಾನ್ಯ ಲತಾ ಮಲ್ಲಿಕಾರ್ಜುನ್ ಅವರು ಕೂಡಲೇ ಸ್ಪಂದಿಸಿ ದಲಿತರ ವಠಾರಕ್ಕೆ ಇಂದು ಪಿಡಿಒ ಎಂ.ಶಿವಣ್ಣ. ಮುಖ್ಯ ಇಂಜಿನಿಯರ್ ಮಂಜು.ನಾಯಕ್ ಹಾಗೂ ಕಾಕೋವರ್.ಬೀರಪ್ಪ. ಹಾಗೂ ಬಿ ರಾಮಣ್ಣ. ಮತ್ತು ಮಹೇಶ ಮಗನಹಳ್ಳಿರ ಸೇರಿ ಹಲವಾರು ಗ್ರಾಮ ಪಂಚಾಯಿತಿಯ ಸದಸ್ಯರನ್ನು ದಲಿತರಕ್ಕೆ ವಠಾರಕ್ಕೆ ಇಂದು ಕಳಿಸಿ ದಲಿತರ ಹಲವಾರು ಸಮಸ್ಯೆಗಳ ಬಗ್ಗೆ ಆದಷ್ಟು ಬೇಗ ಅಂದರೆ ಮುಂದಿನ ತಿಂಗಳು ದಿನಾಂಕ- 4/5/2023ರ ಒಳಗಾಗಿ ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇವೆ ಅನ್ನುವ ಒಂದು ಭರವಸೆಯನ್ನು ಕೊಟ್ಟಿದ್ದಾರೆ.

ಮುಂದಿನ ತಿಂಗಳು ದಿನಾಂಕ- 4/5/2023ರ ಒಳಗಾಗಿ ಸುಮಾರು 20 ಮನೆಗಳು ಇರುವಂತ ದಲಿತರಿಗೆ.ಏನಾದರೂ ಈ ಕುಡಿಯುವ ನೀರನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡರೆ ದಿನಾಂಕ 5.ರಂದು ಯಡ್ಡಿಹಳ್ಳಿ ಗ್ರಾಮ ಪಂಚಾಯಿತಿಯಿಂದ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಅರೆ ಬೆತ್ತಲೆ ಜಾಥಾ ಮಾಡುವುದರ ಮುಖಾಂತರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದ ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ವಿಜಯನಗರ ಜಿಲ್ಲೆ ಸಂಚಾಲಕರು ದುರ್ಗಾ ದಾಸ ಪಿ ಹರಪನಹಳ್ಳಿ ತಾಲೂಕು ಸಂಚಾಲಕರು ಜಿ.ಕೆ. ಕಾಳಪ್ಪ. ವಿಜಯಪ್ಪ.ಎ.ಮಂಜಪ್ಪ. ಹಾಲಪ್ಪ.ತಿರ್ಕಪ್ಪ. ತೆಲಿಗಿ ಶಿವ ಡಿ.ಎಸ್.ಎಸ್ ಅನೇಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button