ಸಮಗ್ರ ಮತ್ತು ಪ್ರಗತಿಶೀಲ ಸಮಾಜವನ್ನು ನಿರ್ಮಿಸಲು ಮಹಿಳೆಯರ ಸಬಲೀಕರಣವು ಅತ್ಯಗತ್ಯ – ಉಪನ್ಯಾಸಕರಾದ ಎಸ್.ವಿ ಸಂಕನಗೌಡ್ರ.
ರೋಣ ಜ.15

ನಗರದ ಅಕ್ಕಮಹಾದೇವಿ ಕಲ್ಯಾಣ ಮಠದಲ್ಲಿ ಮಿಲನ್ ಫೌಂಡೇಶನ್ ವತಿಯಿಂದ ಗರ್ಲ್ಸ್ ಐಕಾನ್ ಕಾರ್ಯಕ್ರಮ ತುಂಬಾ ವಿಜೃಂಭಣೆ ಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್ ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್.ವಿ ಸಂಕನಗೌಡ್ರ ರವರು ಮಹಿಳಾ ಸಬಲೀಕರಣವು ಮಹಿಳೆಯರಿಗೆ ತಮ್ಮಜೀವನಕ್ಕಾಗಿ ನಿರ್ಧಾರಗಳನ್ನು ತೆಗೆದು ಕೊಳ್ಳುವ, ಸಮಾನ ಅವಕಾಶಗಳನ್ನು ಪ್ರವೇಶಿಸುವ ಮತ್ತು ಸಾಮಾಜಿಕ ನಿರ್ಬಂಧಗಳಿಂದ ಮುಕ್ತ ಗೊಳಿಸುವ ಸಾಮರ್ಥ್ಯವನ್ನು ನೀಡುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಶತಮಾನಗಳಿಂದ, ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನ ಮಾನಗಳಲ್ಲಿ ತಾರತಮ್ಯ ಮತ್ತು ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಸಮಗ್ರ ಮತ್ತು ಪ್ರಗತಿಶೀಲ ಸಮಾಜವನ್ನು ನಿರ್ಮಿಸಲು ಮಹಿಳೆಯರ ಸಬಲೀಕರಣವು ಅತ್ಯಗತ್ಯ ಎಂದು ಮಾತನಾಡಿದರು. ಅದೇ ರೀತಿಯಾಗಿ ಭೀಮ್ ಸಂಘದ ನವೀನ ರವರು ಸಾವಿತ್ರಿಬಾಯಿ ಫುಲೆಯವರ ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟವು ಅವರ ಜೀವನದ ಕೆಲಸದ ಮೂಲ ಆಧಾರವಾಗಿತ್ತು, ಅವರ ಕಾಲದ ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತದೆ. ಬಾಲ್ಯ ವಿವಾಹ ಮತ್ತು ಸತಿ (ವಿಧವೆ ದಹನ) ಪದ್ಧತಿಯ ವಿರುದ್ಧ ಅವರು ತೀವ್ರವಾಗಿ ಪ್ರಚಾರ ಮಾಡಿದರು, ಇವೆರಡೂ ಸಮಾಜದಲ್ಲಿ ಆಳವಾಗಿ ಬೇರೂರಿದ್ದವು. ಅದರ ವಿರುದ್ಧವಾಗಿ ಹೋರಾಡಿದರು ಎಂದು ಮಾತನಾಡಿದರು. ಇದೆ ಸಮಯದಲ್ಲಿ ವೇದಿಕೆ ಮೇಲೆ ಉಪನ್ಯಾಸಕರಾದ ಎಂ.ಎಸ್ ಬೋಗಾರ್, ರಾಷ್ಟ್ರಕ್ರಾಂತಿ ನ್ಯೂಸ್ ಸಂಪಾದಕರಾದ ಅಂದಪ್ಪ ಎಂ ಹಾಗೂ ಸಹ ಸಂಪಾದಕರಾದ ರಮೇಶ್ ನಂದಿ ಇನ್ನಿತರರು ಪ್ರಿಯಾ ದಿಗ್ವಿಜಯ್ ಮೇಡಂ. ಪೂಜಾ ಗಡೊಂಗಿ ಮೇಡಂ ರೂಪಾ ಮರಿಗದ್ರಾ ಮೇಡಂ M. L. E. ಸಿಮ್ರಾನ್ ಮೇಡಂ ವಿದ್ಯಾ ಮೇಡಂ. ಸಹನಾ ಮೇಡಂ ಅಂದ್ರೆ ಹಾಗೂ ಕೊಂತೆಮ್ಮ ಮೇಡಂ ನಾಗವೇಣಿ ಮೇಡಂ ಮೆನ್ ಹೆಡ್ ಉಪಸ್ಥಿತರಿದ್ದರು ಶಂಕ್ರಮ್ಮ ಗುದೆನ್ನವರ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ