ಫ್ಲೋರೈಡ್ ಮುಕ್ತ ನೀರು ಬಳಸಿ ಫ್ಲೋರೋಸಿಸ್ ರೋಗ ನಿಯಂತ್ರಿಸಿ – ಆರೋಗ್ಯ ನಿರೀಕ್ಷಣಾಧಿಕಾರಿ ಅಂಗಡಿ.
ಹೊನ್ನಕಟ್ಟಿ ಜ.28

ಬಾಗಲಕೋಟ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಕಟ್ಟಿಯಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮ ಶಾಲಾ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಗುರುಮಾತೆ ಎಮ್.ಎನ್ ಬಿರಾದಾರ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ, ಗುರು ಮಾತೆ ಎಸ್.ಜಿ ಪಾಟೀಲ್, ಅಶ್ವಿನಿ ಹಿರೇಮಠ, ದಿರೇಂದ್ರ ಪೂಜಾರಿ ಫ್ಲೋರೋಸಿಸ್ ರೋಗದ ವೈಜ್ಞಾನಿಕ ಮಾಹಿತಿ ಕರ ಪತ್ರ ಬಿಡುಗಡೆ ಮುಖಾಂತರ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ತಡೆ ಆರೋಗ್ಯ ಜಾಗೃತಿಗೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು, ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಅಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆ ಗಿಂತ ಹೆಚ್ಚು ಫ್ಲೋರೈಡ್ ಇದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ಮಾನವನ ಹಲ್ಲುಗಳಿಗೆ ಹಾಗೂ ಎಲುಬಿಗೆ ಫ್ಲೋರೋಸಿಸ್ ಬಾಧಿಸುತ್ತದೆ.

ಹಲ್ಲುಗಳಲ್ಲಿ ಹಳದಿ ಕಂದು ಬಣ್ಣ ಆಗುವುದು ಮೂಳೆ ಕೀಲುಗಳಲ್ಲಿ ವೀಪರಿತ ನೋವು, ವಾಂತಿ ಹೊಟ್ಟೆ ಉಬ್ಬರ, ಹೊಟ್ಟನೋವು ಹೆಚ್ಚು ಮೂತ್ರ ವಿಸರ್ಜನೆ ನಿಶಕ್ತಿ ಫ್ಲೋರೋಸಿಸ್ ಲಕ್ಷಣಗಳು. ಫ್ಲೋರೋಸಿಸ್ ರೋಗ ನಿಯಂತ್ರಣಕ್ಕಾಗಿ ‘ಸಿ’ ಅನ್ನಾಂಗ ಹೆಚ್ಚಿರುವ ನಿಂಬೆ ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆ, ಹಣ್ಣುಗಳನ್ನು ಆಹಾರದಲ್ಲಿ ಸೇವಿಸಬೇಕು ಕಾಲ್ಸಿಯಂ ಹೆಚ್ಚಿರುವ ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿ, ರಾಗಿ, ಸೇವಿಸಬೇಕು ಕುಡಿಯಲು ಅಡಿಗೆ ಮಾಡಲು ಫ್ಲೋರೈಡ್ ಮುಕ್ತ ನೀರನ್ನು ಬಳಸಬೇಕು ಬೇಕರಿ ಪದಾರ್ಥ ಸೇವಿಸ ಬಾರದು. ಹಲ್ಲುಗಳ ಹಾಗೂ ಎಲಬುಗಳ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ದೂರವಾಣಿ 104 ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಶಾಲಾ ಮಕ್ಕಳ ಜಾಗೃತಿ ಮೂಡಿಸಿದರು. ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ತಡೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಶಾಲಾ ಗುರು ವೃಂದವರು, ಆಶಾ, ಬಿಸಿ ಊಟ ಕಾರ್ಯಕ್ರಮದ ಸಿಬ್ಬಂದಿಗಳು, ಶಾಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.