ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರ ಬಲಿ – ವಿಷಾದನೀಯ ಡಾ, ಜ್ಯೋತಿ ಸುಂಕದ.

ಲಿಂಗಸಗೂರು ಜ.30

ಮೈಕ್ರೋ ಫೈನಾನ್ಸ್ ಕಿರುಕುಳ ದಿನ ದಿಂದ ದಿನಕ್ಕೆ ಹೆಚ್ಚುತ್ತಿದ್ದು ಮಹಿಳೆಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಇಂತಹ ಘಟನೆ ಲಿಂಗಸಗೂರು ತಾಲೂಕಿಗೂ ಕಾಲಿಟ್ಟಿದ್ದು ತಾಲೂಕಿನ ಮಹಿಳೆಯ ಬಲಿ ಪಡೆದಿದೆ, ಅನೇಕ ಮಹಿಳೆಯರು ಕುಟುಂಬದ ನಿರ್ವಹಣೆಗಾಗಿ ಮೈಕ್ರೋ ಫೈನಾನ್ಸ್ ಅಲ್ಲಿ ಸಾಲ ಪಡೆದು ಕೊನೆಗೆ ಅದನ್ನು ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿ ಫೈನಾನ್ಸ್ ನವರ ಕಿರುಕುಳ ತಾಳದೆ ಮರ್ಯಾದೆಗೆ ಹೆದರಿ ಜೀವ ಬಿಟ್ಟಿರುವುದು ಅತೀ ಶೋಚನೀಯ ಸಂಗತಿಯಾಗಿದ್ದು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಕಿರುಕುಳ ನೀಡಿದ ಫೈನಾನ್ಸ್ ಮೇಲೆ ಸರಕಾರವು ತುರ್ತಾಗಿ ಕಾನೂನು ಕ್ರಮ ಕೈಗೊಂಡು ಹಾಗೂ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಸರಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಇತರ ಫೈನಾನ್ಸ್ ಗಳಲ್ಲಿ ಮಹಿಳೆಯರು ಪಡೆದಿರುವ ಸಾಲ ಮನ್ನಾ ಮಾಡಿ ಜೀವನ ಸುಧಾರಣೆಗೆ ಅನುವು ಮಾಡಿ ಕೊಡಬೇಕು ಇತ್ತೀಚಿಗೆ ಲಿಂಗಸಗೂರು ತಾಲೂಕಿನ ಅಂಗನವಾಡಿ ಶಿಕ್ಷಕಿಯಾದ ಅಮರಮ್ಮ ಎಂಬುವರು ಸಹ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮ ಹತ್ಯೆಗೆ ಶರಣಾಗಿದ್ದು ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವುದರ ಜೊತೆಗೆ ಸೂಕ್ತ ಸಮಯದಲ್ಲಿ ನೀಡಿದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ, ಇದಕ್ಕೆ ಸರಕಾರ ಜವಾಬ್ದಾರಿ ಯಿಂದ ಕಾರ್ಯ ನಿರ್ವಹಿಸ ಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಡಾ, ಜ್ಯೋತಿ ಸುಂಕದ ಆಗ್ರಹಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button