ಅಂಚೆ ಇಲಾಖೆಯ ನಿವೃತ್ತ ಪಿಂಚಣಿದಾರರಿಗೆ — ಪಿಂಚಣಿ ಅದಾಲತ್.
ಹೊಸಪೇಟೆ ಜುಲೈ.25

ಅಂಚೆ ಇಲಾಖೆಯಿಂದ ನಿವೃತ್ತರಾದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ದಿನಾಂಕ 27.07.2023 ಗುರುವಾರದಂದು ಸಂಜೆ 4:00 ಗಂಟೆಗೆ ಬಳ್ಳಾರಿ ವಿಭಾಗದಲ್ಲಿ ಪಿಂಚಣಿ ಅದಾಲತ್ ನ್ನು ಆಯೋಜಿಸಲಾಗಿದ್ದು,ಪಿಂಚಣಿದಾರರು ತಮ್ಮ ಕುಂದು ಕೊರತೆಗಳೇನಾದರು ಇದ್ದರೆ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ ಬಳ್ಳಾರಿ ಅವರಿಗೆ ದಿನಾಂಕ 27.07.2023 ರ ಮುಂಚಿತವಾಗಿ ತಲಪುವಂತ ಪತ್ರ ಮುಖೇನ ಅಥವಾ doballari.ka@indiapost.gov.in ಗೆ e-mail ಮುಖಾಂತರ ಕಳುಹಿಸಿಕೊಡಲು ಕೋರಿದೆ ತಮ್ಮ ಅಹವಾಲನೊಂದಿಗೆ ಅಂಚೆ ಅಧೀಕ್ಷಕರ ಕಚೇರಿಯನ್ನು ದಿನಾಂಕ 27.07.2023 ರಂದು ಸಂಜೆ 4:00 ಗಂಟೆಗೆ ಭೇಟಿ ನೀಡಲು ಕೋರಿದೆ. ಪಿಂಚಣಿ ಅದಾಲತ್ತಿನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.
ತಾಲೂಕ ವರದಿಗಾರರು:ಮಾಲತೇಶ್. ಶೆಟ್ಟರ್. ಹೊಸಪೇಟೆ