ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಶ್ರೀರಾಧಾ ಮಾಧವ – ಭಜನಾ ತಂಡದಿಂದ ವಿಶೇಷ ಭಜನೆ.
ಚಳ್ಳಕೆರೆ ಆ.12

ನರಸಿಂಹ ಸಂಕೀರ್ತನೆ…..
ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಶ್ರೀರಾಧಾ ಮಾಧವ ಭಜನಾ ತಂಡದ ಮುಖ್ಯಸ್ಥರಾದ ಶ್ರೀಮತಿ ಪರಿಮಳಾ ನಾಗರಾಜ್ ನೇತೃತ್ವದಲ್ಲಿ ಶುಭಾ ಸೋಮಶೇಖರ್, ಜ್ಯೋತಿ ನಾಗರಾಜ್, ಯತೀಶ್ ಎಂ ಸಿದ್ದಾಪುರ ಅವರ ವಿಶೇಷ ಭಜನೆಗೆ ಶ್ರೀನಿವಾಸ್ ಅವರು ಡೋಲಕ್ ಸಾಥ್ ನೀಡಿದರು.

ರಾಮಚಂದ್ರಪ್ಪ ಸರ್ ಅವರಿಂದ ವಂದನಾರ್ಪಣೆಯ ಮಾತುಗಳು…..
ಭಜನೆಯ ಕೊನೆಯಲ್ಲಿ ರಾಮಚಂದ್ರಪ್ಪ ಅವರಿಂದ ವಂದನಾರ್ಪಣೆ, ಶ್ರೀನರಹರೇಶ್ವರ ದೇವರಿಗೆ ಆರತಿ ಅನ್ನ ಪ್ರಸಾದ ವಿನಿಯೋಗ ನಡೆಯಿತು.

ಭಜನೆಯಲ್ಲಿ ಏಳುಕೋಟಿ ರಾವ್, ವಕೀಲೆ ಮಧುಮತಿ, ಯಶೋಧಾ ದೇವರಾಜ್, ಶಾರದಮ್ಮ, ರಾಜೇಶ್ವರಿ, ಗೀತಾ ರವೀಂದ್ರನಾಥ, ಭಾಗ್ಯಲಕ್ಷ್ಮೀ, ನಿವೇದಿತಾ, ಸರಸ್ವತಿ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

