ಆಪ್ತ ಸಮಾಲೋಚಕರ ಇ.ವಿ.ಟಿ.ಎಚ್.ಎಸ್. ಕಾರ್ಯಕ್ರಮ.
ಕೊಟ್ಟೂರು ಜನೇವರಿ.9

ಆರೋಗ್ಯ ಸಮುದಾಯ ಕೇಂದ್ರದಲ್ಲಿ ಇವಿಟಿಎಚ್ಎಸ್ ಕಾರ್ಯಕ್ರಮವನ್ನು ದೀಪಾ ಅಚ್ಚುವ ಮೂಲಕ ಕಾರ್ಯಕ್ರಮಕ್ಕೆ ಮಂಗಳವಾರ ರಂದು ಚಾಲನೆ ನೀಡಿದರು.ನಂತರ ಇವಿಟಿಎಚ್ಎಸ್ ಕಾರ್ಯಕ್ರಮದ ಬಗ್ಗೆ ಡಾಕ್ಟರ್ ಪಿ ಬಧ್ಯ ನಾಯ್ಕ್ ರವರು ಎಚ್ಐವಿ ಏಡ್ಸ್ ರೋಗದ ಬಗ್ಗೆ ಮುಖ್ಯವಾಗಿ ತಾಯಿಯಿಂದ ಮಗುವಿಗೆ ಎಚ್ಐವಿ ಸಿಫಿಲಿಸ್ ಮತ್ತು ಹೆಪಟೈಟಿಸ್ ಬಿ ಹರಡುವಿಕೆ. ಮತ್ತು ಅದರ ನಿರ್ಮೂಲನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ನಂತರ ಡಾಕ್ಟರ್ ಸುಲೋಚನ. ಸಹಾ ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಅವರ ಊಟ ಮತ್ತು ದಿನಚರಿ ಯಾವ ರೀತಿ ಇರಬೇಕು. ಮಗುವಿನ ಆರೋಗ್ಯವನ್ನು ಯಾವ ರೀತಿಯಾಗಿ ಕಾಪಾಡಿ ಕೊಳ್ಳಬೇಕು. ಗರ್ಭಿಣಿ ಮಹಿಳೆಯರಿಗೆ ಮಾಹಿತಿ ನೀಡಿದರು.ಆಪ್ತ ಸಮಾಲೋಚಕರು ಸಹಾ ಇವಿಟಿಎಚ್ಎಸ್ ಕಾರ್ಯಕ್ರಮದ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಆರೋಗ್ಯ ಸಹಾಯಕ ಪತ್ರೆಗೌಡ್ರು ಹಾಗೂ ಮಂಜುಳ. ಆಪ್ತ ಸಮಾಲೋಚಕರಾದ ಮರುಳರಾದ್ಯ ಜೆ ಎಂ, ಮಹಾಂತೇಶ್ ಜಿ ಎಂ, ಶಶಿಕಲಾ, ತಾತಾನಗೌಡ,ರೇವಣ್ಣ ,ಅರೋಗ್ಯ ಮಿತ್ರ ಶಿವರಾಜ್.. ಅರೋಗ್ಯ ಕೇಂದ್ರದ ಸಿಬ್ಬಂದಿಗಳು.ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಎಸ್ ಬಿ ಎಸ್ ಎಸ್ ಎಸ್ ನ ಎನ್ ಜಿ ಓ ಸಿಬ್ಬಂದಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು