ಕೊಟ್ಟೂರೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ – ಶಾಂತಿ ಸಭೆ.
ಕೊಟ್ಟೂರು ಡಿ.09

ಪಟ್ಟಣದ ಮರಿ ಕೊಟ್ಟೂರೇಶ್ವರ ದೇವಸ್ಥಾನದ ಹತ್ತಿರ ದಿ.16/12/2024 ರಂದು ನಡೆಲಿರುವ ಕೊಟ್ಟೂರಿನ ಆರಾಧ್ಯ ದೈವವಾದ ಶ್ರೀ ಗುರು ಕೊಟ್ಟೂರೇಶ್ವರನ ಕಾರ್ತಿಕೋತ್ಸವ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಲಾಯಿತು. ಪ್ರತಿ ವರ್ಷದಂತೆ ಪಟ್ಟಣ ಪಂಚಾಯಿತಿ ಯುವತಿ ಯಿಂದ ಸ್ವಚ್ಛತೆ ಸಹಕಾರ ನಡೆಯ ಬೇಕು, ಪೊಲೀಸ್ ಬಂದೋಬಸ್ತ್ ಮತ್ತು ಪ್ರಮುಖ ಬೀದಿಗಳಲ್ಲಿ ವಾಹನಗಳ ಅಡಚಣೆ ಇಲ್ಲದೆ ಕಾರ್ತಿಕೋತ್ಸವಕ್ಕೆ ಸುವ್ಯವಸ್ಥೆ ಕಲ್ಪಿಸುವುದು, ಇನ್ನೂ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿ.ವೈ.ಎಸ್ಪಿ ಮಲ್ಲೇಶ್ ಮಲ್ಲಾಪುರ, ಸಿ.ಪಿ.ಐ ವೆಂಕಟಸ್ವಾಮಿ, ಪಿ.ಎಸ್.ಐ ಗೀತಾಂಜಲಿ ಸಿಂಧೆ, ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಶೇಖರಯ್ಯ, ದಾರುಕೇಶ್ ಬಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರು ಬದ್ದಿ ಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು ಚೇತನ್ ಕುಮಾರ್ ಕೆ.ಇ.ಬಿ ಸಹಾಯಕ ನಿರ್ದೇಶಕರು ಕೆ ಕರಿಬಸನಗೌಡರು ಮತ್ತು ದೇವಸ್ಥಾನದ ದೈವಸ್ಥರು ವಿವಿಧ ಸಂಘ ಸಮಿತಿಯ ಮುಖಂಡರುಗಳು ಊರಿನ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್. ಸಿ.ಕೊಟ್ಟೂರು