ದದ್ದಲ್, ಉಮಳಿ ಪನ್ನೂರಲ್ಲಿ ಸ್ಯಾಂಡ್ – ಮಾಫಿಯಾ ಸದ್ದೋ ಸದ್ದು.

ಮಾನ್ವಿ ಏ .29

ಅಕ್ರಮ ಮರಳು ಮಾಫಿಯಾ ದಂಧೆಯನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಕಟ್ಟು ನಿಟ್ಟಿನ ಮಾನದಂಡಗಳನ್ನು ಜಾರಿಗೆ ತಂದಿದೆ. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ್. ಉಮಳಿ ಪನ್ನೂರು, ಹರನಹಳ್ಳಿ, ಜೂಕೂರು ಸೇರಿದಂತೆ ತುಂಗಭದ್ರಾ ನದಿ ಆಸುಪಾಸಿನ ಗ್ರಾಮಗಳಲ್ಲಿ ಹಗಲು ರಾತ್ರಿ ಎನ್ನದೆ ರಾಜಾರೋಷವಾಗಿ ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಮರಳು ಸಾಗಣೆಯಾದರು ಇಲ್ಲಿ ಕಾನೂನು ಇದೇನಾ ಇಲ್ಲವಾ ಎಂದು ಜನರ ಪ್ರಶ್ನೆಯಾಗಿದೆ. ಅಗ್ನಿ ಎಂದೇ ಹೆಸರು ವಾಸಿಯಾದ ಮಾನ್ವಿ ಪಿಐ ಕೆಂಚರೆಡ್ಡಿ ಅವರು ಅಕ್ರಮ ಮರಳು ಮಾಫಿಯಾ ದಂಧೆ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದು, ಮರಳು ಖದೀಮರಿಗೆ ಕೆಂಚರೆಡ್ಡಿ ಹೆಸರು ಕೇಳಿದರೆ ಸಾಕು ಭಯ ಸೃಷ್ಟಿಯಾಗಿದೆ. ಆದರೆ ನಾವು ಹೇಗಾದರಾಗಲಿ ಅಕ್ರಮವಾಗಿ ಮರಳು ಸಾಗಣೆ ಮಾಡಬೇಕು ಎಂದು ನಿತ್ಯ ರಾಜಾರೋಷವಾಗಿ ಮರಳು ಸಾಗಣೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬೇಕು ಎಂದು ರಾಯಲ್ಟಿ ಇಲ್ಲದೆ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಮರಳು ಸಾಗಣೆ ಮಾಡುವ ತಂತ್ರಗಾರಿಕೆಯ ದಂಧೆ ಇಲ್ಲಿ ಹೆಚ್ಚಾಗಿದೆ. ದದ್ದಲ್, ಉಮಳಿ ಪನ್ನೂರು, ಜೂಕೂರು, ಹರನಹಳ್ಳಿ ಗ್ರಾಮದಲ್ಲಿ ಗಣಿ ಇಲಾಖೆ ಜಾಗೂ ಮಾನ್ವಿ ಪೊಲೀಸ್ ಇಲಾಖೆಯವರು ಕಣ್ಣಾಡಿಸಿದರೆ ಸಾಕು ತುಂಗಭದ್ರಾ ನದಿಯಲ್ಲಿಯೇ ಜೆಸಿಬಿ, ಇಟಾಚಿಯನ್ನು ಇಟ್ಟು ನೇರವಾಗಿ ರಾಯಲ್ಟಿ ಇಲ್ಲದೆ ಟಿಪ್ಪರ್ ಗಳಿಗೆ ತುಂಬಲಾಗುತ್ತದೆ.ಯಾರಾದರು ಟಿಪ್ಪರ್ ಗಳನ್ನು ಹಿಡಿದರೆ ಹೇಗೆ ಎಂದು ಕೇಳಿದರೆ ಈ ಭಾಗದ ಕೆಲ ರಾಜಕಾರಣಿಗಳು ನಾನೆಂಬ ಅಹಂಕಾರದಿಂದ ಯಾರು ಬರಲ್ಲ ನಮ್ಮದು ನಡೆಯುತ್ತೆ ಎಂದು ರಾಯಚೂರು ಹಾಗೂ ಮಾನ್ವಿ ತಾಲೂಕಿನಿಂದ ಬರುವ ಒಂದು ಟಿಪ್ಪರ್ ಗೆ 10 ಸಾವಿರ ರೂಪಾಯಿ ವಸೂಲಿ ಮಾಡುವ ಕರಾಳ ದಂಧೆ ಈ ಭಾಗದಲ್ಲಿ ನಡೆಯುತ್ತಿದೆ. ಈ ಭಾಗದ ಕೆಲ ರಾಜಕಾರಣಿಗಳು ಸಚಿವರು ಶಾಸಕರು, ಗಣಿ ಇಲಾಖೆ, ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಗೊತ್ತು ನಾವೆಲ್ಲ ಅವರನ್ನು ನೋಡಿ ಕೊಳ್ಳುತ್ತೇವೆ ನಿಮ್ಮ ಟಿಪ್ಪರ್ ಕಳಿಸಿ ಎಂದು ಅಧಿಕಾರಿಗಳು ಹಾಗೂ ಶಾಸಕರು, ಸಚಿವರ ಹೆಸರು ದುರ್ಬಳಕೆ ಮಾಡಿ ಕೊಳ್ಳುವ ದಂಧೆ ನಡೆಯುತ್ತಿದೆ ಅಂದರೆ ಈ ಕೆಲ ರಾಜಕಾರಣಿಗಳು ಇಂತವರಿಗೆ ಬೆಂಬಲವಾಗಿ ನಿಂತಿದ್ದಾರಾ ಎಂದು ಬುದ್ಧಿ ಜೀವಿಗಳ ಪ್ರಶ್ನೆಯಾಗಿದೆ.ದದ್ದಲ್, ಉಮಳಿ ಪನ್ನೂರು, ಜೂಕೂರು ಹಾಗೂ ಹರನಹಳ್ಳಿ ಗ್ರಾಮದಲ್ಲಿ ಹಾದು ಹೋದ ತುಂಗಭದ್ರಾ ನದಿಗೆ ನೇರವಾಗಿ ಕನ್ನ ಹಾಕುತ್ತಿದ್ದರಿಂದ ಜೀವ ಜಲಚರಗಳು ಸತ್ತರು ಸಹ ಕಿಂಗ್ ಪಿನ್ ಮರಳು ಖದೀಮರಿಗೆ ಹಣ ಗಳಿಸಬೇಕು ಎಂಬುದೆ ಮೂಲ ಉದ್ದೇಶವಾಗಿದೆ.ಅಗ್ನಿ ಎಂದೇ ಹೆಸರು ವಾಸಿಯಾದ ಪಿಐ ಕೆಂಚರೆಡ್ಡಿ ಸಾಹೇಬ್ರ ದದ್ದಲ್, ಉಮಳಿ ಪನ್ನೂರು, ಹರನಹಳ್ಳಿ, ಜೂಕೂರು,ರಾಜೊಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಾಗಣೆ ಮಾಡುವ ದಂಧೆಕೋರರಿಗೆ ಚಳಿ ಬಿಡಿಸುತ್ತಾರಾ ಅಥವಾ ದೇಶದ ಸಂಪತ್ತು ಲೂಟಿಯಾದರು ನಮಗ್ಯಾಕೆ ಬೇಕು ಎಂದು ಸುಮ್ಮನೆ ಕೂರುತ್ತಾರಾ ಎಂದು ಜನರ ಪ್ರಶ್ನೆಯಾಗಿದೆ.

ಬಾಕ್ಸ್ ಸುದ್ದಿ:-

ತಹಸೀಲ್ದಾರ್ ಭೀಮರಾಯ ಸಾಹೇಬ್ರು ಕ್ರಮ ಜರುಗಿಸುತ್ತಾರಾ?

ಮಾನ್ವಿ ತಾಲೂಕಿನ ದದ್ದಲ್, ಉಮಳಿ ಪನ್ನೂರು, ಜೂಕೂರು, ರಾಜೊಳ್ಳಿ, ಹರನಹಳ್ಳಿ ಗ್ರಾಮದ ಮೂಲಕ ಹಾದು ಹೋದ ತುಂಗಭದ್ರಾ ನದಿಯಿಂದ ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮರಳು ಸಾಗಣೆಯಾದರು ಈ ಭಾಗದ ಗ್ರಾಮ ಲೆಕ್ಕಾಧಿಕಾರಿ ಹಾಗು ಕಂದಾಯ ನಿರೀಕ್ಷಕರ ದುರಾಡಳಿತಕ್ಕೆ ಮಾನ್ವಿ ತಹಸೀಲ್ದಾರ್ ಭೀಮರಾಯ ಸಾಹೇಬ್ರು ಕ್ರಮ ಜರುಗಿಸಿ ಅಕ್ರಮ ದಂಧೆಗೆ ಬ್ರೇಕ್ ಹಾಕುವರಾ ಎಂದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಬಾಕ್ಸ್ ಸುದ್ದಿ:-

ಅಕ್ರಮ ಮರಳು ಸದ್ದು, ಬೀಟ್ ಪೊಲೀಸರು ಮಲಗಿದ್ದಾರಾ?

ಮಾನ್ವಿ ತಾಲೂಕಿನ ದದ್ದಲ್, ಉಮಳಿ ಪನ್ನೂರು, ಜೂಕೂರು, ಹರನಹಳ್ಳಿ ಹಾಗೂ ರಾಜೊಳ್ಳಿಯಲ್ಲಿ ಅಕ್ರಮವಾಗಿ ಹಗಲು ಮತ್ತು ರಾತ್ರಿ ರಾಯಲ್ಟಿ ಇಲ್ಲದೆ ನದಿಯಿಂದಲೆ ನೇರವಾಗಿ ಟಿಪ್ಪರ್ ಮೂಲಕ ಸಾಗಣೆಯಾದರು ಸಹ ಇಲ್ಲಿ ಕಾನೂನು ಅನ್ನೋದು ಇಲ್ಲವಾಗಿದ್ದರಿಂದ ಈ ಭಾಗದ ಬೀಟ್ ಪೊಲೀಸರು ಯಾಕೆ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಬಾಕ್ಸ್ ಸುದ್ದಿ:-

ಗಣಿ ಅಧಿಕಾರಿ ಮಹೇದವಸ್ವಾಮಿ ಕಣ್ಣಿದ್ದು ಕುರುಡಾದರ.

ಮಾನ್ವಿ ತಾಲೂಕಿನ ದದ್ದಲ್, ಹರನಹಳ್ಳಿ, ಉಮಳಿ ಪನ್ನೂರು, ಜೂಕೂರು, ರಾಜೊಳ್ಳಿ ಗ್ರಾಮದಲ್ಲಿ ನಿತ್ಯ ಹಗಲು ಮತ್ತು ರಾತ್ರಿ ಎನ್ನದೆ ಅಕ್ರಮವಾಗಿ ಮರಳು ಸಾಗಣೆಯಾದರು ಗಣಿ ಅಧಿಕಾರಿ ಮಹದೇವಸ್ವಾಮಿ ಸಾಹೇಬ್ರು ಮಾತ್ರ ಯಾಕೆ ಮೌನ ತಾಳಿದ್ದಾರೆಂದು ತಿಳಿಯದಾಗಿದ್ದು, ಗಣಿ ಅಧಿಕಾರಿ ಮಹದೇವಸ್ವಾಮಿ ಮೌನವಾಗಿದ್ದಾರೆಂದರೆ ರಾಜಕಾರಣಿಗಳ ಒತ್ತಡಕ್ಕೆ ಮಣಿದಿದ್ದಾರೆಂದು ಜನರ ಆರೋಪವಾಗಿದೆ.

ಕೋಟ್,

ಮಾನ್ವಿ ತಾಲೂಕಿನ ತುಂಗಭದ್ರಾ ನದಿ ಪಾತ್ರದ ದದ್ದಲ್, ಉಮಳಿ ಪನ್ನೂರು, ಜೂಕೂರು, ಹರನಹಳ್ಳಿ, ರಾಜೊಳ್ಳಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಜರುಗಿಸುತ್ತೇವೆ.

ಪುಟ್ಟ ಮಾದಯ್ಯ ಎಂ.ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು.

ಮಾನ್ವಿ ತಾಲೂಕಿನ ಹರನಹಳ್ಳಿ, ದದ್ದಲ್, ರಾಜೊಳ್ಳಿ, ಉಮಳಿಪನ್ನೂರು,ಜೂಕೂರು ಗ್ರಾಮದ ಮೂಲಕ ಹಾದು ಹೋದ ತುಂಗಭದ್ರಾ ನದಿಯಿಂದ ಹಗಲು ಮತ್ತು ರಾತ್ರಿ ಟಿಪ್ಪರ್ ಮೂಲಕ ಮರಳು ಸಾಗಣೆಯಾದರು ಕಾನೂನು ಕಾಪಾಡ ಬೇಕಾದ ಅಧಿಕಾರಿಗಳು ಮಲಗಿದ್ದಾರೆ.

ಹೆಸರು ಹೇಳಲಿಚ್ಚಿಸದ, ಹರನಹಳ್ಳಿ ಗ್ರಾಮಸ್ಥ.

ಕೋಟ್,

ಮಾನ್ವಿ ತಾಲೂಕಲ್ಲಿ ಕಾನೂನು ಅನ್ನೋದು ಇಲ್ಲವಾಗಿದ್ದ ರಿಂದ ತುಂಗಭದ್ರಾ ನದಿಯ ಪಾತ್ರವಾದ ಹರನಹಳ್ಳಿ, ದದ್ದಲ್, ಜೂಕೂರು, ಉಮಳಿ ಪನ್ನೂರು, ರಾಜೊಳ್ಳಿ ಗ್ರಾಮದಲ್ಲಿ ಮರಳಿನ ಸದ್ದು ಕೇಳಿ ಬಂದರು ಕಂದಾಯ,ಗಣಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸದೆ ಮೌನ ತಾಳಿದ್ದಾರೆ.

ಹೆಸರು ಹೇಳಲಿಚ್ಚಿಸದ, ಉಮಳಿ ಪನ್ನೂರು ಗ್ರಾಮಸ್ಥ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button