“ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ಅಮೃತ ಘಳಿಗೆ ಅನವರತ ಜಗದ ಬೆಳಕು”…..

ಕರ್ನಾಕಟ ಸಾಂಸ್ಕೃತಿಕ ನಾಯಕ
ಶ್ರೀಬಸವೇಶ್ವರ ಜಯಂತಿ
ಅಮೃತ ಘಳಿಗೆ ಅನವರತ ಜಗದ ಬೆಳಕು
ಭಕ್ತಿ ಶ್ರೀಬಸವಣ್ಣನಂತಿರಲಿ ನುಡಿ ಶ್ರೀ ಬಸವ
ವಚನದಂತಿರಲಿ
ಕಾಯಕ ನಿಷ್ಠೆ ಬಸವನಂತಿರಲಿ ದಯೆ ಸಕಲರ
ಲೇಸ ಬಯಕೆ ಶ್ರೀಬಸವನಂತಿರಲಿ
ದೇವರ ನಾಮಾಮೃತವ ಶ್ರೀಬಸವನ
ವಚನ ದ್ಯಾನದಂತಿರಲಿ
ತಂದೆ ತಾಯಿ ಬಂಧು ಬಳಗವೇ
ಆತ್ಮಬಲ ಶಿವನ ಶಕ್ತಿ
ಅರಿವಿನ ಗುರು ಬಸವಣ್ಣನಂತಿರಲಿ
ಸಮಾನತೆಯ ಭಾವ ಬೆಸೆಯಿರಿ
ಸೃಷ್ಟಿಯ ಸಿರಿ ಗಾಳಿ ಬೆಳಕು ನೀರು
ಆಹಾರವುಂಡು ಅಹಂ ಪಡದಿರು
ಮನುಜ ಮಾನವ ಕುಲ ತಿಲಕ ಶ್ರೀಬಸವನ
ಮಾನವೀಯತೆಯೇ ವಿಶ್ವದ ನಿಜಸಾರ
ವಿಶ್ವ ಶ್ರೀಬಸವ ಜ್ಞಾನ ಜ್ಯೋತಿಯ ಬೆಳಕಲಿ
ಬಾಳು
ಕರ್ಮ ಧರ್ಮದ ಸುಕೃತ ಫಲ ಮಾನವ ಧರ್ಮ
ದೊಡ್ಡದು
ಕುಲದ ಕೀಳಿರಿಮೆಯಲಿ ಕೊರಗದಿರಿ ದಯವೇ
ಧರ್ಮದ ದಾರಿಯಲಿ ಸಾಗಿರಿ
ಬಸವ ಪಥ ಜಗದ ಸುಪಥವು ಸರ್ವ
ಧರ್ಮಗಳ ದ್ಯೇಯ ಒಂದೆ
ಸತ್ಯ ಧರ್ಮ ದಯೆ ಕರುಣೆ ಇಲ್ಲದೇ
ಯಾವ ಧರ್ಮವೂ ಇಲ್ಲ
ಕೇಡುಕು ಬಿಟ್ಟು ಒಳಿತು ಮಾಡು
ಮಾನವ ದೇಹವೇ ದೇಗುಲ ರೂಪ
ಅಂತರಂಗ ಬಹಿರಂಗ ಎರಡರಲ್ಲೂ ಶುಧ್ಧತೆ
ಇರಲಿ
ಆತ್ಮವೇ ಪರಮಾತ್ಮ ಉತ್ತಮ ಬಂಧು
ಆಸೆಗಳು ನೆಲಸಿದ ತಾಣವೇ ಪವಿತ್ರಸ್ಥಳ
ಸ್ವಾರ್ಥ ಭಾವ ಅಧಿಕವಾದಂತೆ ಅಹಂ
ಬೆಳೆಯುವುದು
ಜನೋಪಯೋಗಿ ತೃಣ ಕಾಯವು
ಮಹೋನ್ನತವು
ಅಕ್ಷಯ ತೃತೀಯ ಸರ್ವರ ತನು ಮನ
ಶುದ್ಧತೆಯು
ಸದಾ ಶ್ರೀಬಸವನ ಸಂಗಮನಾಥನ ಬೆಳಕು
ಕರ್ನಾಟಕ ಸಾಂಸ್ಕೃತಿಕ ನಾಯಕ
ಶ್ರೀಬಸವೇಶ್ವರ ಜಯಂತಿಯ
ಅಮೃತ ಘಳಿಗೆ
ಅನವರತ ಜಗದ ಜನ ಮನದ ಬೆಳಕು
ಶ್ರೀ ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.