ಬಸವಣ್ಣ ನವರ ತತ್ವ ಆಚರಣೆಗಳು ಸಮಾಜಕ್ಕೆಆದರ್ಶವಾಗಿವೆ – ಪ್ರಾಚಾರ್ಯರು ಸಿ.ಬಿ ಪೊಲೀಸ್ ಪಾಟೀಲ್.
ರೋಣ ಮೇ.01

ಕರ್ನಾಟಕ ಪ್ರತಿಯೊಬ್ಬರು ಈ ಹಬ್ಬವನ್ನು ರಾಜ್ಯದಲ್ಲಿ ಆಚರಿಸುತ್ತಾರೆ ಮತ್ತು ತತ್ವಜ್ಞಾನಿ ಮತ್ತು ಕವಿ ಬಸವೇಶ್ವರ ಅವರ ಜನ್ಮದಿನವನ್ನು ಸೂಚಿಸುತ್ತದೆ. ಪ್ರಸಿದ್ದ ಸಂತ ಕ್ರಿ.ಶ 1105 ರಲ್ಲಿ ರಾಜ್ಯದ ಉತ್ತರ ಭಾಗಗಳಲ್ಲಿ ಶಿವ ಭಕ್ತರ ಕುಟುಂಬದಲ್ಲಿ ಜನಿಸಿದರು. ಇವರು ಮಾನವ ಸಮಾನತೆಯನ್ನು ನಂಬಿದ್ದರು. ಮತ್ತು ಅವರ ಪಾತ್ರ ವರ್ಗವನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನು ಹೇಗೆ ಸಮಾನವಾಗಿ ಪರಿಗಣಿಸ ಬೇಕು ಎಂಬುದರ ಬಗ್ಗೆ ಅರಿತರು. ಶಿವನನ್ನು ಸಂಕೇತಿಸುವ ಮತ್ತು ಎಲ್ಲಾ ಲಿಂಗಾಯತರು ಧರಿಸಿರುವ ಇಷ್ಟಲಿಂಗ ಹಾರವನ್ನು ಧರಿಸುವ ಅಭ್ಯಾಸವನ್ನು ಇವರು ಪರಿಚಯಿಸಿದರು. ನಂತರ ಇವರು ತಮ್ಮ ಸಾಮ್ರಾಜ್ಯದ ಮುಖ್ಯ ಮಂತ್ರಿಯಾದರು ಮತ್ತು ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದರು, ಪುರುಷರು ಮತ್ತು ಮಹಿಳೆಯರನ್ನು ಲಿಂಗ ಮತ್ತು ವರ್ಗ ತಾರತಮ್ಯದಿಂದ ಮುಕ್ತ ಗೊಳಿಸಿದರು ಎಂದು ಪ್ರಾಚಾರ್ಯರಾದ ಪೊಲೀಸ್ ಪಾಟೀಲ್ ಮಾತನಾಡಿದರು. ರೋಣ ತಾಲೂಕಿನ ಪ್ರಸಿದ್ಧ ಕೆ.ಎಸ್.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಹಾಗೂ ಎನ್.ಎಸ್.ಎಸ್ ಘಟಕದ ಅಡಿಯಲ್ಲಿ ಶ್ರೀ ಬಸವೇಶ್ವರ ಜಯಂತಿಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಾರಂಭದಲ್ಲಿ ಬಸವೇಶ್ವರ ಭಾವ ಚಿತ್ರಕ್ಕೆ ಸಂಪ್ರದಾಯ ಬದ್ಧವಾಗಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಮಯದಲ್ಲಿ ವೇದಿಕೆ ಮೇಲೆ ಸ್ಥಾನಿಕ ಮುಖ್ಯಸ್ಥರಾದ ಆಯ್.ಬಿ ದಂಡಿನ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎ.ಎಚ್ ನಾಯ್ಕರ್, ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಸಿಬ್ಬಂದಿ ಬೋಧಕೇತರ ಪ್ರೌಢ ಶಾಲೆಯ ವರ್ಗದವರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ