ದೇಶ ಕಂಡ ಅಪ್ರತಿಮ ನಾಯಕ ಡಾ.ಬಾಬು ಜಗಜೀವನರಾಂ ಅವರ 117 ನೇ. ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಜಮಖಂಡಿ ಏಪ್ರಿಲ್.05

ದಿನಾಂಕ 5.4.2024 ರಂದು ಸ್ವತಂತ್ರ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಹಾಗೂ ಭಾರತ ದೇಶದ ಉಪ ಪ್ರಧಾನ ಮಂತ್ರಿಗಳು. ಡಾ. ಬಾಬು ಜಗಜೀವನ್ ರಾಮ್ ರವರ 117 ನೇ. ಜಯಂತೋತ್ಸವದ ಹಾರ್ದಿಕ ಶುಭಾಶಯಗಳು ಡಾ. ಬಾಬು ಜಗಜೀವನ್ ರಾಮ್ ಅವರು, ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಬಾಬು ಜಗಜೀವನ್ ರಾಮ್ ರಾಷ್ಟ್ರದ ಏಳಿಗೆಗೆ ಸಮಾಜ ಸುಧಾರಣೆ ಮತ್ತು ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದರು. ಈ ಕಾರಣ ದಿಂದ ಸರ್ಕಾರ ಅವರ ಜಯಂತಿಯನ್ನು ರಾಷ್ಟ್ರಾದ್ಯಂತ ಆಚರಿಸುತ್ತಾ ಬಂದಿದೆ. ಬಾಬು ಜಗಜೀವನ್ ರಾಮ್ ರವರು ಬಿಹಾರದ ರಾಜ್ಯದ ಚಾಂದ್ವ ಗ್ರಾಮದಲ್ಲಿ 1908 ರ ಏಪ್ರಿಲ್ 5 ರಂದು ಜನಿಸಿದರು ಬಾಲ್ಯದಿಂದಲೇ ಪ್ರತಿಭಾವಂತ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಿದರು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಏಳು ಬಾರಿ ರೈಲ್ವೆ ಬಜೆಟ್ ಮಂಡಿಸಿದರು ಎಂದು ರೈಲ್ವೆ ಇಲಾಖೆಯ ದರ ಹೆಚ್ಚಿಸದೆ ಎಲ್ಲ ವರ್ಗದ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ದೊರಕುವಂತೆ ಮಾಡಿದರು ರೈಲ್ವೇ ನೌಕರರ ಶ್ರೇಯೋಭಿವೃದ್ದಿ ಬಗ್ಗೆಯೂ ಗಮನ ಹರಿಸಿದರು ಕೃಷಿ ಕ್ಷೇತ್ರದಲ್ಲಿ ಅವರು ಸಾಧನೆ ಗುರುತಿಸಿ ಹಸಿರು ಕ್ರಾಂತಿಯ ಹರಿಕಾರ ಎಂದು ಬಿರುದನ್ನು ನೀಡಿ ಗೌರವಿಸಿದ್ದಾರೆ. ಇಂತಹ ಮಹಾನುಭಾವರ ಜಯಂತಿಯನ್ನು ಆಚರಿಸುವುದು ನಮ್ಮ ಭಾಗ್ಯ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ತತ್ವ ಸಿದ್ಧಾಂತವನ್ನು ಇಂದಿನ ವಿದ್ಯಾರ್ಥಿಗಳು ಅವರ ಚಿಂತನೆಯನ್ನು ಅಳವಡಿಸಿ ಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಾಗಲಕೋಟೆ ಜಿಲ್ಲಾ ಸಂಘಟನಾ ಸಂಚಾಲಕರಾದ ಮುತ್ತಣ್ಣ ಮೇತ್ರಿ ಅವರು ಅಭಿಪ್ರಾಯ ಪಟ್ಟರು ಜಮಖಂಡಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸ ಭೆಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಜಮಖಂಡಿಯ ಅಸಿಸ್ಟೆಂಟ್ ಕಮಿಷನರ್ ಕಾಮಗೊಂಡ ತಹಶೀಲ್ದಾರ ಸದಾಶಿವ ಮಕ್ಕೋಜಿ ಸಮಾಜ ಕಲ್ಯಾಣ ಅಧಿಕಾರಿಗಳಾದ ಸಿ ಎಸ್ ಗಡದೇವರಮಠ ಹಿರಿಯ ಮುಖಂಡರಾದ ಸಿದ್ದು ಮಿಸಿ ಈಶ್ವರ್ ವಾಳೆನವರ್ ದಲಿತ ಮುಖಂಡರಾದ ಮುತ್ತಣ್ಣ ಮೇತ್ರಿ ರವಿ ಬಬಲೇಶ್ವರ ದಾನೇಶ್ ಗಾಟ್ಗೆ ಶೇಖರ್ ಭಜಂತ್ರಿ ಸಿದ್ದು ಸತ್ಯನವರ ರಾಜು ಲೋಕಂಡೆ ಪ್ರಮೋದ ಘಾಟಗೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button