ಮೇ 5. ರಿಂದ ಪ್ರಾರಂಭವಾಗುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಜಾತಿ, ಜನ ಗಣತಿಯಲ್ಲಿ “ಮಾದಿಗ” ಎಂದು ನಮೂದಿಸಿ – ಕ.ಮಾ.ದ ಅಧ್ಯಕ್ಷ ಕುಡುತೀನಿ.ಮಹೇಶ್.
ಕೂಡ್ಲಿಗಿ ಮೇ.03

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕರ್ನಾಟಕ ಮಾದಿಗ ದಂಡೋರ ತಾಲೂಕು ಅಧ್ಯಕ್ಷರಾದ ಕುಡುತಿನಿ ಮಹೇಶ್ ಹೆಗ್ಡಾಳ್ ಇವರು ಮೇ 5. ರಂದು ಸರ್ಕಾರ ದಿಂದ ನಾಗಮೋಹನ್ ದಾಸ್ ವರದಿಯ ಪ್ರಕಾರವಾಗಿ ಒಳ ಮೀಸಲಾತಿಯ ಜಾತಿ ಜನ ಗಣತಿಯನ್ನು ಸರ್ಕಾರ ದಿಂದ ಮನೆ ಮನೆಗೂ ಸಮೀಕ್ಷೆ ಮಾಡಲು ಮುಂದಾಗಿದ್ದು ಈ ಒಳ ಮೀಸಲಾತಿಯ ಕುರಿತು ಅಧಿಕಾರಿಗಳಿಗೆ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಹರಿಜನ ಮತ್ತು ಮದರ್ ಎಂದು ಬರಿಸದೆ ಮೂಲ ಜಾತಿಯಾದ “ಮಾದಿಗ” ಎಂದು ನಮೂದಿಸಿರಿ.

ಅಧಿಕಾರಿಗಳು ಪ್ರಶ್ನೆ ಮಾಡಿದ ಸಮಯದಲ್ಲಿ “ಮಾದಿಗ” ಸಮುದಾಯದ ಯುವಕರು ಮಹಿಳೆಯರು ಮುಖಂಡರುಗಳು ಹಿರಿಯರು ಸಮಸ್ತ “ಮಾದಿಗ” ಸಮುದಾಯದ ಬಂಧುಗಳಲ್ಲಿ ಮತ್ತು ಮುಖಂಡರುಗಳಲ್ಲಿ ಹಾಗೂ ವಿದ್ಯಾರ್ಥಿ ಅಧಿಕಾರಿ ವರ್ಗಗಳಲ್ಲಿ “ಮಾದಿಗ” ಸಮುದಾಯದ ಬಂಧುಗಳು “ಮಾದಿಗ” ಎಂದು ಬರೆಯಬೇಕೆಂದು ವಿನಂತಿಸಿ ಕೊಳ್ಳುತ್ತೇನೆ ಎಂದು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ