ಸೊಳ್ಳೆ ಉತ್ಪತ್ತಿ ತಡೆಯಿರಿ ಡೆಂಗ್ಯೂ ರೋಗ ನಿಯಂತ್ರಿಸಿ – ಎಸ್.ಎಸ್ ಅಂಗಡಿ.

ಗುಂಡನಪಲ್ಲೆ ಮೇ.03

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೀಟಜನ್ಯ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಬೆನಕಟ್ಪಿ ಉಪ ಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದ ಚಾವಡಿಯಲ್ಲಿ “ಡೆಂಗ್ಯೂ ರೋಗ ತಡೆಗೆ ಸ್ವಯಂ ರಕ್ಷಣಾ ಕ್ರಮಗಳ ಆರೋಗ್ಯ ಅರಿವು ಕಾರ್ಯಕ್ರಮ” ಆಯೋಜಿಸಲಾಗಿತ್ತು. ಗ್ರಾಮ ಮುಖಂಡರಾದ ಗುರಪ್ಪ ಬಬಲೇಶ್ವರ, ಹುಚ್ಚಪ್ಪ ಕಾರಜೋಳ, ಆರೋಗ್ಯ ಅಧಿಕಾರಿ ಎಸ್.ಎಸ್ ಅಂಗಡಿ, ನಾಗರಾಜ ಪಾಟೀಲ್, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ವೈಜ್ಞಾನಿಕ ಮಾಹಿತಿ ಕರ ಪತ್ರ ವಿತರಿಸುವ ಮುಖಾಂತರ “ಡೆಂಗ್ಯೂ ತಡೆಗೆ ಸ್ವಯಂ ರಕ್ಷಣಾ ಕ್ರಮಗಳ ಆರೋಗ್ಯ ಅರಿವು” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು “ಕಡಿತ ಚಿಕ್ಕದು ಹಾನಿ ದೊಡ್ಡದು” ಸೊಳ್ಳಗಳ ಉತ್ಪತ್ತಿ ತಾಣಗಳ ನಿರ್ಮೂಲನೆಯೇ ನಮ್ಮ ಗುರಿಯಾಗಿಸ ಬೇಕು ಎಂಬ ಘೋಷ ವಾಕ್ಯಯೊಂದಿಗೆ ಬೆಸಿಗೆ ಕಾಲದಲ್ಲಿ ನೀರಿನ ಸಂಗ್ರಹಗಳಲ್ಲಿ ಈಡೀಜ್ ಇಜಿಪ್ತಿ ಎಂಬ ಸೊಳ್ಳೆ ಸ್ವಚ್ಛವಾದ ನೀರಿನ ಸಂಗ್ರಹಗಳಲ್ಲಿ ಸಂತಾನೊತ್ಪತ್ತಿ ಮಾಡುವುದು ಮನೆಯಲ್ಲಿ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ವಾರಕ್ಕೊಮ್ಮೆ ಪರಿಕರಗಳ ಸ್ವಚ್ಛತೆ ಕಾಪಾಡಬೇಕು ಟೆಂಗಿನ ಚಿಪ್ಪು ಟಾಯರ್ ಟ್ಯೂಬ್ ಅನವಶ್ಯಕ ಘನತಾಜ್ಯ ಕಸ ವಿಲೇವಾರಿ ಮಾಡಬೇಕು, ಸೊಳ್ಳೆಗಳ ಕಡಿತ ತಪ್ಪಿಸಿ ಕೊಳ್ಳಲು ಸೊಳ್ಳೆ ನಿರೋಧಕ ಸೊಳ್ಳೆ ಪರದೆ ಬಳಸಬೇಕು, ವೀಪರೀತ ಜ್ವರ ನಿಶಕ್ತ ತಲೆನೋವು ವಾಂತಿ ಡೆಂಗ್ಯೂ ರೋಗದ ಲಕ್ಷಣ ಗಳಿರಬಹುದು ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಯಾವುದೇ ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆಯ ಮೂಲಕ ಆರೋಗ್ಯ ಸಲಹೆ ಪಡೆದು ಕೊಳ್ಳಬಹುದು ಡೆಂಗ್ಯೂ ರೋಗ ತಡೆಗೆ ಆರೋಗ್ಯ ಇಲಾಖೆಯ ಜೋತೆ ಸಹಕರಿಸಿರಿ ಎಂದರು. “ಡೆಂಗ್ಯೂ ತಡೆಗೆ ಸ್ವಯಂ ರಕ್ಷಣಾ ಕ್ರಮಗಳ ಆರೋಗ್ಯ ಅರಿವು ಜನ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button