ಪಟ್ಟಣದಲ್ಲಿ ಕುಡಿಯುವ – ನೀರಿಗೆ ಹಾಹಾಕಾರ.
ಮಾನ್ವಿ ಮೇ.03

ಮಾನ್ವಿ ಪಟ್ಟಣದ ಆದಾಪುರ ಪೇಟೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದ್ದು. ಶಾಸಕ ಹಂಪಯ್ಯ ನಾಯಕರೆ ಸಚಿವ ಎನ್.ಎಸ್ ಬೋಸರಾಜು ಸಾಹೇಬ್ರೆ ಬಡವರ ಕಷ್ಟ ಕೇಳಿ ಜನರಿಗೆ ನೀರು ಕೊಡುವ ಕೆಲಸ ಮಾಡಿಸ್ವಾಮಿ ಎಂದು ಶೋಷಿತರ ಕೂಗಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಆದಾಪುರ ಪೇಟೆಯಲ್ಲಿ ಸರಿ ಸುಮಾರು ಮೂವತ್ತು ವರ್ಷದಿಂದ ನೀರು ಬರುತ್ತಿಲ್ಲವೆಂದು ನಿವಾಸಿಗಳು ಆರೋಪಿಸುತ್ತಾರೆಂದರೆ ಪುರಸಭೆ ಅಧಿಕಾರಿಗಳು ಏನು ಮಾಡುತ್ತಾರೆಂದು ಜನರು ಬೀದಿಗೆ ಬಂದಿರುವುದೇ ಸಾಕ್ಷಿಯಾಗಿದೆ.
ಶಾಸಕ ಹಂಪಯ್ಯ ನಾಯಕರೆ ಸಚಿವ ಎನ್.ಎಸ್ ಬೋಸರಾಜು ಸಾಹೇಬ್ರೆ ನಿಮ್ಮನ್ನು ನಂಬಿದ ಜನರು ಬೀದಿಗೆ ಬಂದು ನೀರು ಕೊಡಿ ಎಂದು ಕೇಳುತ್ತಾರೆಂದರೆ ಶಾಶ್ವತವಾಗಿ ನೀರು ಕೊಡುವ ಕೆಲಸ ಮಾಡಿ ಎಂಬುದು ಮಾನ್ವಿ ಜನರ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ