ಆಲಗೂರದಲ್ಲಿ ಸಿಡಿಲು ಬಡೆದು ಮೃತಪಟ್ಟ ಆಕಾಶನ ಮನೆಗೆ – ಶಾಸಕರು ರಾಜುಗೌಡ ಭೇಟಿ ನೀಡಿ ಪರಿಹಾರದ ಚೆಕ್ ವಿತರಿಸಿದರು.

ಆಲಗೂರ ಮೇ.03

ದೇವರ ಹಿಪ್ಪರಗಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಮೊನ್ನೆ ನಡೆದ ಗಾಳಿ ಮಳೆ ಹಾಗೂ ಸಿಡಿಲು ಬಡೆದು ಮೃತಪಟ್ಟ ಗ್ರಾಮದ ಆಕಾಶ ಹಯ್ಯಾಳದಪ್ಪ ಯಂಕಂಚಿ ಅವರು ಮನೆಗೆ ಭೇಟಿ ನೀಡಿ 5₹ ಲಕ್ಷ ಪರಿಹಾರ ಚೆಕ್ ನೀಡಿದರು. ಹಾಗೂ ಹುಣಶ್ಯಾಳ ಗ್ರಾಮದಲ್ಲಿ ಅದೇ ದಿನ ಪ್ರಭುಗೌಡ, ನಂದಗೌಡ,ದೇವರಗುಡಿ ಇವರ ಎತ್ತಿಗೆ ಸಿಡಿಲು ಬಡೆದು ಮೃತ ಪಟ್ಟಿತು ಅವರು ಮನೆಗೆ ಭೇಟಿ ನೀಡಿ 32.000 ಸಾವಿರ ಪರಹಾರ ಚೆಕ್ ನೀಡಿದರು.

ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲುವಾಡಿಗಿ ಹಾಗೂ ತಾಲ್ಲೂಕಿನ ತಹಶಿಲ್ದಾರರಾದ ಪ್ರಕಾಶ ಸಿಂದಗಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ, ಹಾಗೂ ಮುಖಂಡರಾದ ಶೇಖರಗೌಡ ಪಾಟೀಲ, ಉಮೇಶ ಇಂಗಳಗಿ ಶರಣು ಧರಿ ಹುಸೇನಿ ನಾಗಾವಿ ಹಾಗೂ ಇಂದು ದೇವರ ಹಿಪ್ಪರಗಿ ಪಟ್ಟಣದಲ್ಲಿ ಐದು ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜೆಡಿಎಸ್ ಮುಖಂಡರು ಈ ಕಾರ್ಯಕ್ರಮ ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button