ಇಂದ್ರೀಯಗಳ ನಿಗ್ರಹದಿಂದ ಸಾರ್ಥಕ ಬದುಕು ಸಾಧ್ಯ – ಮಾತಾಜೀ ಜ್ಯೋತ್ಸ್ನಾಮಯೀ.
ಚಳ್ಳಕೆರೆ ಮೇ.03

ಇಂದ್ರೀಯಗಳ ನಿಗ್ರಹದಿಂದ ಮಾನವನ ಬದುಕು ಸಾರ್ಥಕವಾಗುತ್ತದೆ ಎಂದು ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಇಂದ್ರೀಯಗಳಿಗೆ ದಾಸನಾಗದೆ ಭಗವಂತನ ದಾಸನಾಗ ಬೇಕು. ಭಗವಂತನ ನಿತ್ಯ ಸ್ಮರಣೆಯಿಂದ ಆನಂದ ದೊರೆಯುತ್ತದೆ. ಶರಣಾಗತಿ ಮತ್ತು ವಿನಯ ವಂತಿಕೆಯನ್ನು ಬೆಳೆಸಿ ಕೊಳ್ಳುವುದರಿಂದ ದೇವರಿಗೆ ಹತ್ತಿರರಾಗುತ್ತೇವೆ. ಶ್ರೀರಾಮಕೃಷ್ಣರು ನಮಸ್ಕಾರಾಸ್ತ್ರ ದಿಂದ ಇಡೀ ಜಗತ್ತನ್ನೇ ಗೆದ್ದರು. ಆದ್ದರಿಂದ ಮಹಾತ್ಮರ ಜೀವನ ಮತ್ತು ಸಂದೇಶಗಳ ಅನುಸರಣೆ ಯಿಂದ ಅಪರೂಪದ ಮಾನವ ಜನ್ಮವನ್ನು ಸಾರ್ಥಕ ಪಡಿಸಿ ಕೊಳ್ಳಬಹುದು ಎಂದು ಹೇಳಿದರು.

ಈ ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಆರತಿ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಕುಮಾರಿ ವೈಷ್ಣವಿ ಅಕ್ಷರ ಮತ್ತು ಚಿರಂಜೀವಿ ನಿಖಿಲೇಶ್ ಯಾದವ್ ಪಠಿಸಿದರು. ಈ ಸತ್ಸಂಗದ ದಿವ್ಯ ಸಾನಿಧ್ಯವನ್ನು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಮತ ರಾಘವೇಂದ್ರ, ಸರಸ್ವತಮ್ಮ ಗೋವಿಂದರಾಜು, ಯತೀಶ್.ಎಂ ಸಿದ್ದಾಪುರ, ಸುಮನ ಕೋಟೇಶ್ವರ, ಮಾಣಿಕ್ಯ ಸತ್ಯನಾರಾಯಣ, ಧ್ರುವ, ಎಂ.ಗೀತಾ ನಾಗರಾಜ್, ರತ್ನಮ್ಮ ಚೆನ್ನಬಸಪ್ಪ, ಸಿ.ಎಸ್ ಭಾರತಿ, ಚೇತನ್, ಗೀತಾ ವೆಂಕಟೇಶರೆಡ್ಡಿ, ಜಿ.ಯಶೋಧಾ ಪ್ರಕಾಶ್, ಶ್ರೀಪಾದ್, ಮಂಜುಳ ಉಮೇಶ್, ಕಾವೇರಿ ಸುರೇಶ್ ಯಾದವ್, ಶೈಲಜ ಶ್ರೀನಿವಾಸ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.