ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ.ನಸ್ರುಲ್ಲಾರವರಿಗೆ – ಅಭಿನಂದನೆಗಳು ತಿಳಿಸಿದ ಸಾರ್ವಜನಿಕರು.

ಕೂಡ್ಲಿಗಿ ಮೇ.04

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 16 ನೇ. ವಾರ್ಡಿನಲ್ಲಿ ಬರುವ ಪೇಟೆ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಊರಿನ ಒಳಗಡೆ ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಲಯ ಇದ್ದು ಈ ಶೌಚಾಲಯವು ವರ್ಷವಿಡಿ ಸ್ವಚ್ಛತೆ ಇಲ್ಲದೆ ನೆನೆಗುದಿಗೆ ಬಿದ್ದಿದ್ದರು. ಎಷ್ಟೋ ಬಾರಿ ಶೌಚಾಲಯ ಸ್ವಚ್ಛ ಗೊಳಿಸಲು ತಿಳಿಸಿದರು. ಎಚ್ಚೆತ್ತು ಕೊಳ್ಳದ ಅಧಿಕಾರಿಗಳ ಈ ಶೌಚಾಲಯಕ್ಕೆ ಹೋಗಿ ಬರುವಂಥ ಸಾರ್ವಜನಿಕರು ಸರಿಯಾದ ರೀತಿಯಲ್ಲಿ ಈ ಮಹಿಳಾ ಶೌಚಾಲಯದಲ್ಲಿ ಮಹಿಳೆಯರು ಮಲ ವಿಸರ್ಜನೆ ಮಾಡಿದ ನಂತರ ನೀರು ಬಳಸಲಿಕ್ಕೆ ನೀರಿಲ್ಲದೆ ದುರ್ನಾತ ದಿಂದ ಇರುವಂತ ಶೌಚಾಲಯವನ್ನು ಸಾರ್ವಜನಿಕ ರು ಈ ಶೌಚಾಲಯ ಅಕ್ಕ ಪಕ್ಕದಲ್ಲಿರುವಂತಹ ಮನೆಯವರು ಹಾಗೂ ಶೌಚಾಲಯಕ್ಕೆ ಅಂಟಿ ಕೊಂಡಿರುವಂತಹ ಪರಿಶಿಷ್ಟ ಜಾತಿಯ ಬಾಲಕಿಯರ ವಿದ್ಯಾರ್ಥಿ ನಿಲಯವಿದ್ದು ಈ ಮಹಿಳಾ ಶೌಚಾಲಯ ದಿಂದ ಗಬ್ಬು ನಾರುತ್ತಿರುವ ದುರ್ವಾಸನೆ ಹಾಗೂ ಈ ವಾಸನೆ ಯಿಂದ ಅನೇಕ ರೋಗ ರುಜಿನಗಳು ಉಂಟಾಗುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಜನರಿದ್ದಾರೆ ಎಂದು ಶೌಚಾಲಯದ ಪಕ್ಕದಲ್ಲಿರುವ ಜನರ ಗೋಳಾಗಿದೆ ಕಾರಣ ಮಲ ಮೂತ್ರ ವಿಸರ್ಜನೆ ಉಪಯೋಗಿಸಿದ ನಂತರ ಮೂಲ ಸೌಕರ್ಯವಾದ ನೀರು ಹಾಗೂ ಸರಿಯಾದ ರೀತಿಯಲ್ಲಿ ಕೊಠಡಿಗಳಿಗೆ ಬಾಗಿಲುಗಳಿಲ್ಲದೆ ಶೌಚಾಲಯದ ಒಳ ಚರಂಡಿ ಮುಚ್ಚಿರುವ ಕಾರಣ ಗಬ್ಬು ನಾರುತ್ತಿರುವ ಪ್ರದೇಶವಾಗಿದೆ ಇದನ್ನರಿತ ಸಾರ್ವಜನಿಕ ವಲಯದಲ್ಲಿ ಮಾಧ್ಯಮಕ್ಕೆ ತಿಳಿಸಿದ ನಂತರ ಪಟ್ಟಣ ಪಂಚಾಯತಿಯ ಪ್ರಭಾರಿ ಮುಖ್ಯ ಅಧಿಕಾರಿಗಳಾದ ಎ. ನಸ್ರುಲ್ಲಾರವರು ಸಾರ್ವಜನಿಕರ ಮನವಿಯನ್ನು ತಿಳಿದಾತಕ್ಷಣ ಇಲಾಖೆಯ ಮೇಸ್ತ್ರಿ ಪರಶುರಾಮ್ ಹಾಗೂ ಸಿಬ್ಬಂದಿ ಯಿಂದ ಶೌಚಾಲಯವನ್ನು ಸಂಪೂರ್ಣವಾಗಿ ನೀರಿನಿಂದ ಸ್ವಚ್ಛ ಗೊಳಿಸಿದ ನಂತರ ಸಾರ್ವಜನಿಕರರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ವೀರೇಶ್ ಹಾಗೂ ಮಂಜುಳವರು ಅಭಿನಂದನೆಗಳು ತಿಳಿಸಿದರು.ಹಾಗೆ ಇಂತಹ ಅಧಿಕಾರಿಗಳು ಊರಿನಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವುದರಿಂದ ಯಾವುದೇ ಜನರಿಗೆ ರೋಗ ರುಜನೆಗಳಿಗೆ ತುತ್ತಾಗದೆ ಪಟ್ಟಣವು ಸಹ ಸ್ವಚ್ಚವಾಗಿರುತ್ತದೆ ಎಂದು ಸಾರ್ವಜನಿಕರು ಅಭಿನಂದನೆಗಳು ತಿಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button