ಪರಿಶಿಷ್ಟ ಜಾತಿಯ ಸಮೀಕ್ಷೆಯಲ್ಲಿ ಪೂರ್ಣ ಮಾಹಿತಿ ನೀಡಲು – ವೈ.ಸಿ ಕಾಂಬಳೆ ಕರೆ.
ಬಾಗಲಕೋಟ ಮೇ.03

ಇದೆ ಮೇ 5 ರಿಂದ ರಾಜ್ಯದಲ್ಲಿ ಆರಂಭ ವಾಗಲಿರುವ ಪರಿಶಿಷ್ಟ ಜಾತಿಗಳ ಒಳ ಮಿಸಲಾತಿಯ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಸಮಗಾರ ಹರಳಯ್ಯ ಸಮುದಾಯ ಬಾಂಧವರು ಸಮೀಕ್ಷೆಗೆ ಮನೆ ಮನೆಗೆ ಬಂದ ಅಧಿಕಾರಿಗೆ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಪೂರ್ಣ ಮಾಹಿತಿ ನೀಡುವುದರೊಂದಿಗೆ, ಜಾತಿಯ ಕಾಲಂ ನಲ್ಲಿ ತಮ್ಮ ಜಾತಿಯ ಪ್ರಮಾಣ ಪತ್ರದಲ್ಲಿ ಇರುವಂತೆ ಮಾಹಿತಿ ನೀಡಲು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಒಳ ಮಿಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ವೈ.ಸಿ ಕಾಂಬಳೆ ಕರೆ ನೀಡಿದ್ದಾರೆ.

ಅವರು ಬಾಗಲಕೋಟೆ ನವ ನಗರದ ಡಾ, ಬಿ. ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಒಳ ಮಿಸಲಾತಿಯ ಹೋರಾಟ ಸಮಿತಿಯ ಸಮಾಜದ ಮುಖಂಡರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಭೆಯಲ್ಲಿ ಹಿರಿಯ ಮುಖಂಡರಾದ ಬಸವರಾಜ ಮಾನೆ ಮಾತನಾಡಿ ಸಮಗಾರ ಸಮುದಾಯದವರು ಅನುಕ್ರಮ ನಂಬರ್ 93 ರಲ್ಲಿ ತಮ್ಮ ಜಾತಿಯನ್ನು ನಮೂದಿಸಲು ಸೂಚಿಸಿದರು.

ಅದೇ ರೀತಿ ಸಮಕಾಲ ಪತ್ರಿಕೆಯ ಸಂಪಾದಕರಾದ ಪ್ರೊ. ಹೇಮಂತ್ ಭೂತನಾಳ ರವರು ಮಾತನಾಡಿ ಸಮಗಾರರ ಉಪ ಪಂಗಡಗಳು ತಮ್ಮ ತಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವಂತೆ ಅನುಕ್ರಮ ನಂಬರ್ 22 ರಲ್ಲಿ ಪ್ರತ್ಯೇಕವಾಗಿ 23 ಭಾಗಗಳನ್ನು ರಚಿಸಲಾಗಿದ್ದು, ಅಲ್ಲಿ ತಮ್ಮ ಜಾತಿ ಪ್ರಮಾಣ ಪತ್ರದಂತೆ ಮಾಹಿತಿಯನ್ನು ಸಮೀಕ್ಷಾದಾರರಿಗೆ ನೀಡಲು ಹೇಳಿದರು.

ಸಾಹಿತಿ ಅಶೋಕ ಹೊನಕೇರಿ ರವರು ಸಮುದಾಯದವರಲ್ಲಿ ಇರುವಂತ ಗೊಂದಲಗಳನ್ನು ಆದಷ್ಟು ಬೇಗ ಬಗೆಹರಿಸಿ ಕೊಂಡು ಜಾತಿ ನಮೂದು ಮಾಡುವ ಕುರಿತು ಸಲಹೆ ನೀಡಿದರು. ತೇರದಾಳ ಪುರಸಭೆ ಸದಸ್ಯ ಸಚಿನ್ ಕೊಡತೆ ಮಾತನಾಡಿ ಒಳ ಮೀಸಲಾತಿ ಕುರಿತು ನಾವು ಪ್ರತಿ ಹಳ್ಳಿಗೆ ಸಮಾಜದ ಬಾಂಧವರಿಗೆ ಇದರ ಕುರಿತು ಮಾಹಿತಿಯನ್ನು ತಲುಪಿಸುವಂತಾಗ ಬೇಕು ಹಾಗೂ ಸಮಾಜದ ನೌಕರರು ಮುಖಂಡರು ಅನಕ್ಷರಸ್ಥ ಜನರಿಗೆ ಸರಿಯಾದ ತಿಳುವಳಿಕೆ ನೀಡಬೇಕು ಎಂದರು.

ಅದೇ ರೀತಿ ಮುಖಂಡ ವಸಂತ ಮನಗೂಳಿ ಅವರು ಮಾತನಾಡಿ ಸಮಾಜದಲ್ಲಿ ಹೋರಾಟಕ್ಕೆ ಅಂತ ಒಳ ಮೀಸಲಾತಿಯ ಹೊಸ ಸಮಿತಿಗಳನ್ನು ಪ್ರತ್ಯೇಕವಾಗಿ ರಚಿಸಲು ಹೇಳಿದರು. ಈ ಕಾರ್ಯಕ್ರಮವನ್ನು ನಿಂಗರಾಜ ಮಬ್ರುಮಕರ ನಿರೂಪಿಸಿದರು. ಸದಾಶಿವ ಸಣ್ಣಕ್ಕಿ ಸ್ವಾಗತಿಸಿದರು. ನೀಲಕಂಠ ರಾಜಾಪುರ ವಂದಿಸಿದರು. ಈ ಸಭೆಯಲ್ಲಿ ಗೌತಮ ರಾಯಪ್ಪ ದೊಡವಾಡ, ರಾಜಶೇಖರ.ಯ ಸಾಂಬ್ರಾಣಿ, ಈಶ್ವರ ಬಾಲಾಗಾವಿ, ಹನಮಂತ ಸೂರ್ಯವಂಶಿ, ಅನಿಲ.ಬಿ ಕಾಂಬಳೆ, ಶಂಕರ ಚಂದಾವರಿ, ಸಂಗಪ್ಪ ಖಾನಪೇಠ, ಮಂಜುನಾಥ ಬಾಲಾಗಾವಿ, ಶಂಕರ ಮಿರ್ಜಿ, ಮಾರುತಿ ದೊಡಮನಿ, ಮಲ್ಲಿಕಾರ್ಜುನ ಚಿಟಗುಬ್ಬಿ, ರವಿ ಮಂಟೂರ, ಪ್ರಭಾಕರ ಸಣ್ಣಕ್ಕಿ, ನಾಗೇಶ ಚಂದಾವರಿ, ಪ್ರಭು ಕೊಡತೆ, ರಾಜು ಸಣ್ಣಕ್ಕಿ ಮುಂತಾದವರು ಭಾಗವಹಿಸಿದ್ದರು.