ಮೊಳಕಾಲ್ಮುರು ಕ್ಷೇತ್ರದಲ್ಲಿ ಬರಗಾಲದ ಪರಿಸ್ಥಿತಿ ಕಂಡು ತಾಲೂಕಿನ ಸಾರ್ವಜನಿಕರಿಗೆ ಮಾನ್ಯ ಅಭಿವೃದ್ದಿ ಹರಿಕಾರರಾದ ಎನ್.ವೈ.ಗೋಪಾಲಕೃಷ್ಣ ಶಾಸಕರು ಅಭಿವೃದ್ದಿ ಕಡೆ ಮುಖ ಮಾಡಿದ್ದಾರೆ.

ಮೊಳಕಾಲ್ಮೂರು ಸಪ್ಟೆಂಬರ್.21

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಪಟ್ಟಣದಲ್ಲಿ ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೊಳಕಾಲ್ಮುರು, ಪಟ್ಟಣ ಹಾಗೂ ಕೊಂಡ್ಲಹಳ್ಳಿ ಗ್ರಾಮದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮದಲ್ಲಿ ವಿಘ್ನ ವಿನಾಶಕನ ಆಶೀರ್ವಾದ ಪಡೆದು ಕ್ಷೇತ್ರದ ಯೋಜನೆಗಳ ಅಭಿವೃದ್ಧಿಗಳ ಬಗ್ಗೆ ಯೋಚಿಸಿ ಮೊಳಕಾಲ್ಮೂರು ಕ್ಷೇತ್ರವನ್ನು ಅಭಿವೃದ್ಧಿಯ ಮುಖವಾಗಿ ಕೊಂಡೊಯ್ಯಲು ಎನ್ ವೈ ಗೋಪಾಲಕೃಷ್ಣ ಶಾಸಕರ ಛಲವಾಗಿರುತ್ತದೆ ಮೊಳಕಾಲ್ಮೂರು ತಾಲೂಕನ್ನು ತೀವ್ರ ಬರಪೀಡಿತ ತಾಲೂಕನ್ನಾಗಿ ರಾಜ್ಯದಲ್ಲಿ 34ನೇ ತಾಲೂಕಾಗಿ ಸರ್ಕಾರಕ್ಕೆ ಘೋಷಣೆ ಮಾಡಿಸಿದ ಎನ್ ವೈ ಗೋಪಾಲಕೃಷ್ಣ ಶಾಸಕರು ಇನ್ಸೂರೆನ್ಸ್ ಗಳು ಬೆಳೆ ಪರಿಹಾರಗಳು ಇಂತಹ ಬರ ಪರಿಸ್ಥಿತಿಯಲ್ಲಿ ನೇರವಾಗಿ ರೈತರ ಅಕೌಂಟಿಗೆ ಜಮಾವಾಗುತ್ತದೆ ಎಂದು ಶಾಸಕರು ತಿಳಿಸಿದರು.

ನಮ್ಮ ಕಾಂಗ್ರೆಸ್ ಪಕ್ಷ ಸರ್ಕಾರದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಲು ಗೃಹಲಕ್ಷ್ಮಿ ಯೋಜನೆಯನ್ನು ಪ್ರತಿ ಕುಟುಂಬಕ್ಕೆ ಮಹಿಳೆಯ ಯಜಮಾನಿ ಒಡತಿಗೆ 2000 ದಂತೆ ಒಂದು ವರ್ಷಕ್ಕೆ 24,000 ಬಡವರ ಕುಟುಂಬಕ್ಕೆ ಸಹಾಯ ಮಾಡುತ್ತಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ ಮತ್ತು ಗೃಹಜೋತಿ ಸಹ ತಿಂಗಳ ಬಂದರೆ ವಿದ್ಯುತ್ ಬಿಲ್ ಕಟ್ಟಬೇಕಾಗಿತ್ತು ಇದನ್ನು ಸಹ ನಮ್ಮ ಸರ್ಕಾರವೇ 200 ಯೂನಿಟ್ಟು ವಿದ್ಯುತ್ ಬಳಕೆಯ ದರವನ್ನು ಸರ್ಕಾರವೇ ಕಟ್ಟಿಕೊಳ್ಳುತ್ತದೆ ಮತ್ತು ಪ್ರತಿ ಒಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿಯಂತೆ ಬಿಪಿಎಲ್ ಪಡಿತರ ಚೀಟಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ 5 ಕೆಜಿ ಅಕ್ಕಿ ಮತ್ತು ಇನ್ನು ಐದು ಕೆಜಿಗೆ ಹಣದ ಮುಖಾಂತರ ನೇರವಾಗಿ ಬಿಪಿಎಲ್ ಪಡಿತರ ಫಲಾನುಭವಿಯ ವ್ಯಕ್ತಿಗೆ ಒಂದು ಕೆಜಿಗೆ 34 ರೂನಂತೆ 5 ಕೆಜಿ ಅಕ್ಕಿಗೆ 170 ರಾಜ್ಯದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ದಾರರ ಫಲಾನುಭವಿಗೆ ನೇರವಾಗಿ ಹಣ ಸಂದಾಯವಾಗುತ್ತದೆ ಮತ್ತು ಶಕ್ತಿ ಯೋಜನೆ ಸಹ ಮಹಿಳೆಯರಿಗೆ ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಫ್ರೀಯಾಗಿ ಯೋಜನೆ ರೂಪಿಸಿದ್ದು ಮಹಿಳೆಯರಿಗೆ ಅನುಕೂಲವಾಗುತ್ತದೆ ಇದೇ ಧರ್ಮವೆಂಬುದು ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ತಿಳಿಸಿದರು ನಮ್ಮ ಪಕ್ಷ ಇಲ್ಲದಿದ್ದರೆ ಬಡ ಜನಗಳ ಆರ್ಥಿಕ ಪರಿಸ್ಥಿತಿ ಬಹಳ ಕಷ್ಟ ಎನಿಸುತ್ತಿತ್ತು ಕಾಂಗ್ರೆಸ್ ಪಕ್ಷ ಏನೇ ಆದರೂ ಬಡವರಿಗಾಗಿ ಇರುತ್ತದೆ ಎಂದು ಕಂಡುಬರುತ್ತದೆ ಇದು ಪ್ರತಿಯೊಬ್ಬ ಸಾರ್ವಜನಿಕರ ತಿಳಿಯಲೇಬೇಕಾದ ವಿಷಯವಾಗಿರುತ್ತದೆ ಈ ಸಂದರ್ಭದಲ್ಲಿ ಮೊಳಕಾಲ್ಮೂರು ಪಟ್ಟಣದ ಖಾದರ್ ರವಿಕುಮಾರ ನವೀನ ಸುಭಾನ್ ಸಾಬ್ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಕಾಶ್ ಪಟ್ಟಣದ ಪ್ರಮುಖರು

ಸ್ಥಳೀಯ ಮುಖಂಡರು ಪಕ್ಷದ ಕಾರ್ಯಕರ್ತರ ಅಭಿಮಾನಿಗಳ ಮೊದಲಾದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.

ಮೊಳಕಾಲ್ಮೂರು

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button