ಹರಿವಾಣದ ಬಳಗದಿಂದಲೇ ಅಂತ್ಯಕ್ರಿಯೆ ವಿಧಿ ವಿಧಾನಗಳಿಗೆ – ನಿರ್ಧಾರ ಎಂ.ನರೇಂದ್ರ.

ತರೀಕೆರೆ ಫೆ .21

ಕಾರೆಹಳ್ಳಿ ಮಹಾ ಸಂಸ್ಥಾನದ ಶಿವನಿ ಏಳೂರು ಬುಡಕಟ್ಟಿಗೆ ಸೇರಿದ ತರೀಕೆರೆ ಪುಟ್ಟವ್ವನ ಸಿದ್ದಣ್ಣನವರ ಅರಿವಾಣ ಬಳಗದಿಂದಲೇ ಬಳಗಸ್ತರ ಕುಟುಂಬದಲ್ಲಿ ನಿಧನರಾದರೆ ಅವರ ಅಂತ್ಯಕ್ರಿಯೆಗೆ. ಹಾಗೂ ವಿಧಿ ವಿಧಾನಗಳಿಗೆ ಸಂಪೂರ್ಣ ಖರ್ಚು ವೆಚ್ಚಗಳನ್ನು. ಬಳಗದಿಂದಲೇ. ಬರಿಸಬಹು ದೆಂದು ಯಜಮಾನರದ ಶ್ರೀ ಟಿ.ಪಿ ಸುಬ್ಬಣ್ಣ ಬುದ್ಧಿವಂತರಾದ ಗೋವಿಂದಪ್ಪ ಗೌಡರಾದ ಹರೀಶ್. ಕೋಲ್ಕಾರರಾದ ಕೆಂಚಪ್ಪ ಇವರ ನೇತೃತ್ವದ ಸರ್ವ ಸದಸ್ಯರ ಮಹಾ ಸಭೆಯಲ್ಲಿ ತೀರ್ಮಾನಿಸಿ ನಿರ್ಧರಿಸಲಾಗಿದೆ ಎಂದು. ಬಳಗದ ಕಾರ್ಯ ನಿರ್ವಾಹಕರಾದ ನರೇಂದ್ರ ರವರು. ತಿಳಿಸಿದರು. ಶ್ರೀ ಗುರು ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪುಟ್ಟಮ್ಮನ ಸಿದ್ದಣ್ಣನವರ 2025/26 ನೇ. ಸಾಲಿನ ಸರ್ವ ಸದಸ್ಯರುಗಳ ಬಳಗಸ್ತರ ಸಭೆಯಲ್ಲಿ ಮಾತನಾಡಿದ ಯಜಮಾನರಾದ ಟಿ.ಪಿ ಸುಬ್ಬಣ್ಣ. ಬಳಗದ ಶುಭ ಕಾರ್ಯಗಳಾದ. ಮದುವೆ ನಾಮಕರಣ ಹಾಗೂ ಸಣ್ಣ ವಿಳ್ಳೆವು ಹಾಗೂ ಹಸಿರು ವಿಳ್ಳೇವು ತಿದ್ದುವ ಕಾರ್ಯವನ್ನು ನಮ್ಮ ಬಳಗಸ್ತರು. ಕುಲ ಗುರು ಶ್ರೀ ರೇವಣಸಿದ್ದೇಶ್ವರ. ಬುಡಕಟಿನ ಗುರು ವಿನೊಂದಿಗೆ. ಬಳಗದಲ್ಲಿರುವ ಹೆಣ್ಣುಮಕ್ಕಳ ಮದುವೆಯಲ್ಲಿ ಶಾಸ್ತ್ರ ವಿಧಿ ವಿಧಾನಗಳನ್ನು ನಡೆಸಿ ಕೊಂಡು ಇಂದಿಗೂ ಬರಲಾಗುತ್ತಿದೆ ಎಂದರು.

ಬಳಗಸ್ತರು ಕುಟುಂಬದಲ್ಲಿ ನಿಧನರಾದ. ಶವ ಸಂಸ್ಕಾರ. ಕಾರ್ಯದಲ್ಲಿ ಗೈರು ಹಾಜರಾದರೆ ಅದೇ ರೀತಿ ಸರತಿಯಂತೆ ಕಾರ್ಯ ನಿರ್ವಹಣೆಯನ್ನು ನಿರ್ವಹಿಸಿದಿದ್ದರೆ. ರೂ.1000 ದಂಡ ಶುಲ್ಕವನ್ನು ವಿಧಿಸಲಾಗಿದೆ ಎಂದು ಬುದ್ಧಿವಂತರಾದ ಶ್ರೀ ಗೋವಿಂದಪ್ಪ ಟಿ.ಆರ್ ತಿಳಿಸಿದರು.ಇದೇ ಸಂದರ್ಭದಲ್ಲಿ 24/25 ನೇ. ಸಾಲಿನ ಲೆಕ್ಕ ಪರಿಶೀಲನೆ ಹಾಗೂ ವಿವಿಧ ರೂಪಗಳಿಂದ ಸಂದಾಯವಾದ ಕಾಣಿಕೆಯನ್ನು ಜಮಾ ಮಾಡಿ ಕೊಂಡು ಬಳಗಸ್ತರಿಗೆ. ಶೇಕಡಾ ಒಂದರಂತೆ 10 ಲಕ್ಷ ರೂಗಳನ್ನು 100 ಜನರಿಗೆ ವಿತರಿಸಲಾಗಿದೆ ಎಂದು. ಬಳಗದ ಗೌಡರಾದ ಹರೀಶ್ ಹಾಗೂ. ಮಂಜುನಾಥ್ ರವರು ತಿಳಿಸಿದರು.ಈ ಸಭೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾಗಳು ದಾಟಿ ಎಸ್ ಧರ್ಮರಾಜ್ ಟಿ.ಎಸ್ ಪ್ರಕಾಶ್. ಭೂ ನ್ಯಾಯ ಮಂಡಳಿ ಸದಸ್ಯ ಟಿ.ಎನ್ ಜಗದೀಶ್ ಕುರುಬ ಸಮಾಜ ಮುಖಂಡರಾದಂತಹ ಟಿ.ಎನ್ ಶಿವಣ್ಣ ಇವರುಗಳು ಸಭೆಯಲ್ಲಿ ಹೊರಗಡೆ ಊರಿನಲ್ಲಿರುವ ಬಳಗಸ್ತರಿಗೆ ಪ್ರತಿ ವರ್ಷ ವಿಧಿಸಿರುವ ಶುಲ್ಕವನ್ನು ಪಾವತಿಸಿ ಕೊಳ್ಳಬೇಕು. ಹೆಚ್ಚುವರಿ ಸಭೆಗಳಲ್ಲಿ ಭಾಗವಹಿಸಿದೆ ಇರುವವರಿಗೆ ಇನ್ನೊಮ್ಮೆ ಅವಕಾಶ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಸಭೆಯಲ್ಲಿ ಟಿ.ಎಚ್ ಗಣೇಶ್. ಟಿ.ಜಿ ಗಣೇಶ್ ಟಿ.ಎಸ್ ಶಿವಕುಮಾರ್. ಬೆಂಗಳೂರು ರಾಜಣ್ಣ ಟಿ.ಬಿ ವಿಶ್ವನಾಥ್ ಗೀತ ಉಮೇಶ್ ಸುಮಾ ಕನಕ ಜ್ಯೋತಿ ಅಂಬಿಕಾ ಮತ್ತಿತರ ನೂರಾರು ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಟಿ.ಎಸ್ ಶಂಕರ್ ಪ್ರಾರ್ಥಿಸಿ ಟಿ.ಬಿ ಕಾರ್ತಿಕ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button