ಮೊಳಕಾಲ್ಮುರು ಪಟ್ಟಣದ ಪ್ರಮುಖರು ಶ್ರೀ ಕಾಲಭೈರವ ಸಿದ್ದೇಶ್ವರನ ಜಾತ್ರೆಗೆ ಶಾಸಕರಿಗೆ ಮನವಿ ಸಲ್ಲಿಸಿದ ಮುಖಂಡರು.
ಮೊಳಕಾಲ್ಮುರು ಜನೇವರಿ.30
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಇಂದು ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರನ್ನು ಮೊಳಕಾಲ್ಮುರು ಪಟ್ಟಣದ ಮುಖಂಡರುಗಳು ಭೇಟಿ ಮಾಡಿ ಶ್ರೀ ನುಂಕೇಮಲೆ ಸಿದ್ದೇಶ್ವರ ಸ್ವಾಮಿ ಜಾತ್ರೆ ಗೆ ಮಹೋತ್ಸವ ಕಾರ್ಯಕ್ರಮಕ್ಕೆ * ಅವ್ವಾನಿಸಬೇಕು ಎಂದು ಮೊಳಕಾಲ್ಮುರು ಪಟ್ಟಣದ ಪ್ರಮುಖ ಮುಖಂಡ ಚಂದ್ರ ಗೌಡ್ರು ಮತ್ತು ಶಿವಕುಮಾರ್ ಇನ್ನು ಮುಂತಾದ ಮುಖಂಡರಗಳು ಸೇರಿ 33 ಗ್ರಾಮಗಳ ಮುಖಂಡರಗಳು ಸೇರಿ ಈ ಕಾಲಭೈರವ ಸಿದ್ದೇಶ್ವರನ ಕಮಿಟಿ ಇರುತ್ತದೆ ಈ ಕಮಿಟಿಯ ಮುಖಂಡರುಗಳೆಲ್ಲ ಸೇರಿ ಜಾತ್ರೆ ಮಾಡಲು ಸ್ವಾಮಿಯ ಪುಷ್ಪವನ್ನು ಕೇಳಲು ಹೋಗಿರುತ್ತಾರೆ ಸ್ವಾಮಿಯು ತಡ ಇಲ್ಲದ ಹಾಗೆ ಪುಷ್ಪಮಾಲೆಯನ್ನು ಬಲಗಡೆಗೆ ಬೀಳಿಸುತ್ತಾನೆ ಕಾಲ ಭೈರವಸಿದ್ದೇಶ್ವರ ಆಗ ಈ 33 ಗ್ರಾಮಗಳ ಮುಖಂಡರುಗಳು ಸೇರಿ ಒಳ್ಳೆ ಶುಭ ಕೊಟ್ಟಿರುತ್ತಾನೆ ಸ್ವಾಮಿ ಎಂದು ಅಂದುಕೊಂಡು ಜಾತ್ರೆಗೆ ಸಿದ್ದರಾಗುತ್ತಾರೆ ಮೂರು ವರ್ಷಕ್ಕೆ ಒಂದು ಸಲ ಮೊಳಕಾಲ್ಮೂರು ಪಟ್ಟಣಕ್ಕೆ ಶ್ರೀ ಕಾಲಭೈರವ ಸಿದ್ದೇಶ್ವರ ಸ್ವಾಮಿಯನ್ನು ಕಾಲ್ನಡಿಗೆಯ ಮೇಲೆ ಪಲ್ಲಕ್ಕಿ ವಾದ್ಯ ಮೇಳದೊಂದಿಗೆ ಪೂಜಾರ ಹಟ್ಟಿ ಹಳೆಕೆರೆ ಆನಗಲ್ಲು ಕೊಮ್ಮನ ಪಟ್ಟಿ ಗುಡ್ಡ ಇಳಿದು ಬರುವಾಗ ಕಾಲಭೈರವ ಸಿದ್ದೇಶ್ವರ ಸ್ವಾಮಿಯು ಈ ಗ್ರಾಮಗಳ ಸಾರ್ವಜನಿಕರು ಹಣ್ಣು ಕಾಯಿ ಮತ್ತು ನೈವೇದ್ಯದೊಂದಿಗೆ ಕಾಲಭೈರವ ಸಿದ್ದೇಶ್ವರನ ದರ್ಶನ ಪಡೆದು ಭಕ್ತಾದಿಗಳು ಸಂತೃಪ್ತರಾಗುತ್ತಾರೆ ಅದೇ ರೀತಿಯಾಗಿ ಮುಂದೆ ಮೊಳಕಾಲ್ಮುರು ಪಟ್ಟಣಕ್ಕೆ ಸಾಗುತ್ತಾ ಮೊಳಕಾಲ್ಮೂರು ಪಟ್ಟಣದಲ್ಲಿ ಕೋಟೆ ಬಡಾವಣೆ ಎಂಬ ಜಾಗದಲ್ಲಿ ಸ್ವಾಮಿಯ ದೇವಸ್ಥಾನ ವಿದ್ದು ಆ ದೇವಸ್ಥಾನದಲ್ಲಿ ಮೂರು ದಿನ ಪೂಜಾ ಕಾರ್ಯಕ್ರಮಗಳೊಂದಿಗೆ ಕೋಲಾಟ ನಾಟಕ ಭಜನೆ ಮುಂತಾದ ಕಾರ್ಯಕ್ರಮಗಳು ಮೊಳಕಾಲ್ಮುರು ಪಟ್ಟಣದಲ್ಲಿ ಜರುಗುತ್ತವೆ ಎಲ್ಲಾ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಜಾತ್ರೆ ಮಾಡುತ್ತಾರೆ ಸುಮಾರು ಸಾವಿರಾರು ಭಕ್ತಾದಿಗಳು ಬರುತ್ತಾರೆಂದು ಕಂಡು ಬರುತ್ತದೆ ಅದಕ್ಕಾಗಿ ಅಭಿವೃದ್ಧಿ ಹರಿಕಾರರು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮೊಳಕಾಲ್ಮೂರು ಪಟ್ಟದ ಪ್ರಮುಖರು ಮನವಿ ಸಲ್ಲಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು