ಸಮಾಜದಲ್ಲಿ ಪಕ್ಷ ಭೇದ ಕಾಣಿಸಿ ಕೊಂಡರೆ ಸಮಾಜದ ಬೆಳವಣಿಗೆ ಕುಂಠಿತ – ಬಿ.ಕೆ.ಮಾಟೂರ.
ಹುನಗುಂದ ಫೆಬ್ರುವರಿ.8
ಸಾಮಾಜಿಕ ಸೇವೆಯಲ್ಲಿ ಇರುವವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಸಮಾಜದಲ್ಲಿ ಪಕ್ಷ ಭೇದ ಕಾಣಿಸಿ ಕೊಂಡರೆ ಸಮಾಜದ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಸಮಾಜದ ತಾಲ್ಲೂಕು ಬಣಜಿಗ ಸಮಾಜದ ಗೌರಾಧ್ಯಕ್ಷ ಬಿ.ಕೆ. ಮಾಟೂರ ಹೇಳಿದರು.ತಾಲ್ಲೂಕು ಬಣಜಿಗ ಸಮಾಜದ ವತಿಯಿಂದ ಪಟ್ಟಣದ ಹಾದಿಮನಿ ಶರಣರ ಆವರಣದಲ್ಲಿ ನಡೆದದ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮುಖಂಡ ಸಂಗಣ್ಣ ಎಮ್ಮಿ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜಕ್ಕಾಗಿ ಜಾಗೆ ಪಡೆಯಲು ಮತ್ತು ಸಮಾಜದಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡಲು ದತ್ತಿ ನಿಧಿ ಸಂಗ್ರಹ ಯೋಜನೆಗೆ ಎಲ್ಲರೂ ಕೈಜೋಡಿಸ ಬೇಕು ಇದಕ್ಕಾಗಿ ನನ್ನ ತಾಯಿ ಲಿಂ.ಈರಮ್ಮನವರ ಸ್ಮರಣಾರ್ಥವಾಗಿ ಒಂದು ಲಕ್ಷ ರೂಪಾಯಿಗಳನ್ನು ದತ್ತಿ ನಿಧಿಗೆ ನೀಡುತ್ತೇನೆ. ಬಂದ ಬಡ್ಡಿ ಹಣವನ್ನು ಸಮಾಜ ಬಾಂಧವರು ಪ್ರತಿ ವರ್ಷ ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ನೀಡಬೇಕೆಂದು ವಿನಂತಿಸಿ ಕೊಂಡರು.ದೇಸಾಯಪ್ಪ ಹವಾಲ್ದಾರ, ಎಸ್.ಎನ್.ಹಾದಿಮನಿ ಮಾತನಾಡಿದರು.ಜಿಲ್ಲಾ ಬಣಜಿಗ ಸಮಿತಿಗೆ ಆಯ್ಕೆಯಾದ ಶರಣಪ್ಪ ಬೆಲ್ಲದ, ಮಹಾಂತೇಶ ಕಂಠಿ, ರೇವಣ ಸಿದ್ದಪ್ಪ ಇಜೆದಾರ ಅವರನ್ನು ತಾಲ್ಲೂಕು ಘಟಕದಿಂದ ಸತ್ಕರಿಸಲಾಯಿತು.ಅಂದಾನಪ್ಪ ಹಾದಿಮನಿ, ಬಸವರಾಜ ಗೌಡರ, ಸಂಗಪ್ಪ ಹವಾಲ್ದಾರ, ಗುರುರಾಜ ಮಾಟಲದಿನ್ನಿ, ಶ್ರೀಶೈಲ ಅಂಗಡಿ, ಪ್ರಭು ಇದ್ದಲಗಿ, ಗಂಗಮ್ಮ ಎಮ್ಮಿ, ರಾಣಿ ತೋಪಲಕಟ್ಟಿ, ಲಕ್ಷ್ಮೀಬಾಯಿ ಕಂಠಿ, ಪ್ರೇಮಕ್ಕೆ ಸಂಗಮದ, ನಿಂಗಮ್ಮ ಹಾದಿಮನಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ