ಅಂಬೇಡ್ಕರ್ ಮೌಲ್ಯ ಪಾಲಿಸುವತ್ತ ಡಾ. ಕಾಂತರಾಜ್ ಮುಂದು…..
ತರೀಕೆರೆ ಮೇ.07
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತರೀಕೆರೆಯ ಕಂದಾಯ ಉಪ ವಿಭಾಗಾಧಿಕಾರಿಯಾಗಿ ಸದಾ ಸಕ್ರಿಯರಾಗಿರುವ ಡಾಕ್ಟರ್ ಕಾಂತರಾಜ್ ಅಂಬೇಡ್ಕರ್ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳು ಸದಾ ಅಚ್ಚ ಹಸಿರಾಗಿಸಲು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಮೈಗೂಡಿಸಿ ಕೊಂಡಿರುವರು, ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೇಲೆ ಇಟ್ಟಿರುವ ಗೌರವಾರ್ದಕ್ಕೆ ಇದೊಂದು ನಿದರ್ಶನ, ಒಬ್ಬ ನಿಷ್ಠಾವಂತ ಅಧಿಕಾರಿಯಾಗಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಇಲಾಖೆಯ ಅಧಿಕಾರಿ ವರ್ಗವನ್ನು ಸದಾ ಹಸನ್ಮುಖಿಯಾಗಿ ಕಾರ್ಯ ತತ್ಪರತೆಯಲ್ಲಿ ಮಿನುಗುತ್ತಿರುವ ನಕ್ಷತ್ರವೆಂದು ಕಾಂತರಾಜ್ ರವರನ್ನು ಹೆಸರಿಸಬಹುದಾಗಿದೆ ಪ್ರತಿನಿತ್ಯ ತಮ್ಮ ಕಚೇರಿ ಕೆಲಸ ಕಾರ್ಯಗಳಲ್ಲಿ ಪಾರದರ್ಶಕ ಆಡಳಿತ ನಡೆಸುವುದರೊಂದಿಗೆ ತಾಲೂಕಿನ ದೂರದ ಊರುಗಳಿಂದ ಜನ ಸಾಮಾನ್ಯರು ಬರುತ್ತಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿರುವುದಕ್ಕೆ ಸಾರ್ವಜನಿಕರಿಂದ ಈ ಅಧಿಕಾರಿಯ ಮೇಲೆ ಪ್ರಶಂಶ ಪೂರ್ವ ಭಾವನೆಗಳು ವ್ಯಕ್ತವಾಗುತ್ತಿರುವುದು ಸಾರ್ವಜನಿಕರ ಮತ್ತು ಅಧಿಕಾರಿ ವರ್ಗಗಳ ನಡುವಿನ ಮಹತ್ತರ ಸೇತು ಬಂಧವಾಗಿದೆ ಎಂದು ಹೇಳಬಹುದು.
ಒಬ್ಬ ಅಧಿಕಾರಿಯಾಗಿ ಕಾಂತರಾಜ್ ಕೇವಲ ಕಚೇರಿಗಳಲ್ಲಷ್ಟೇ ಇರದೆ ಬಾಹ್ಯವಾಗಿ ಸಾರ್ವಜನಿಕರಿಂದ ಆಗಾಗಿ ದೂರುಗಳು ಬಂದಾಗ ಅದನ್ನು ನಿಭಾಯಿಸುವಲ್ಲಿ ತಮ್ಮ ಸಮಯ ಪ್ರಜ್ಞೆಗೆ ಸಾಕ್ಷಿ ಬೂತರಾಗಿರುತ್ತಾರೆ ಇಂತಹ ಸರಳ ವ್ಯಕ್ತಿತ್ವದ ಕಂದಾಯ ಉಪ ವಿಭಾಗಾಧಿಕಾರಿ ಕೇವಲ ತರೀಕೆರೆ ಮಾತ್ರ ಸೀಮಿತವಾಗದೆ ಕಡೂರು ಅಜ್ಜಂಪುರ ಎನ್ ಆರ್ ಪುರ ತಾಲೂಕಿನ ಜನ ಸಾಮಾನ್ಯರ ಸಮಸ್ಯೆಗಳಿಗೆ ಕ್ರಿಯಾಶೀಲರಾಗಿ ಸ್ಪಂದಿಸುತ್ತಿರುವುದು ಆ ಭಾಗದ ಜನರ ಒಂದು ಪುಣ್ಯ ಎಂದು ಭಾವಿಸುವುದರಲ್ಲಿ ಯಾವುದೇ ಅತಿಶೊಯೋಕ್ತಿ ಯಾಗಲಾರದು ಇಂತಹ ಒಬ್ಬ ಕ್ರಿಯಾಶೀಲ ಅಧಿಕಾರಿ ತಮ್ಮ ಅಧೀನ ನೌಕರರನ್ನು ಉತ್ತಮ ಮನಸ್ಥಿತಿಯ ನೌಕರ ವರ್ಗವನ್ನು ರೂಪಿಸುವುದಕ್ಕೆ ಈಗಾಗಲೇ ಸಾರ್ವಜನಿಕರಿಂದ ಕಾಂತರಾಜ್ ಅವರಿಗೆ ಪ್ರಶಂಸೆಯ ಮಹಾ ಪೂರವೇ ಹರಿದು ಬರುತ್ತಿದೆ. ಇಂತಹ ಅಧಿಕಾರಿ ಇನ್ನಷ್ಟು ವರ್ಷ ಕಾಲ ತಮ್ಮ ವಿಭಾಗದ ಕಾರ್ಯ ವ್ಯಾಪ್ತಿಯಲ್ಲಿ ದಲಿತರ, ನೊಂದವರ, ಶೋಷಿತ ಸಮುದಾಯಗಳಿಗೆ ನಿರಂತರ ದನಿಯಾಗಿ ಕೆಲಸ ಮಾಡಲೆಂದು ಸಾರ್ವಜನಿಕರು ಅಪೇಕ್ಷೆ ಪಡುತ್ತಿದ್ದಾರೆ ಯುವ ಸಮುದಾಯ ತಮ್ಮ ಮುಂದಿನ ಭವಿಷ್ಯದ ದಿಕ್ಸೂಚಿಯನ್ನು ಸಂಕ್ರಮಣದ ನಡಿಗೆಯಲ್ಲಿ ತೆಗೆದು ಕೊಂಡು ಹೋಗಲು ನಿಷ್ಠಾವಂತ ಮತ್ತು ಕರ್ತವ್ಯದ ಪ್ರತೀಕರಾದ ಡಾಕ್ಟರ್ ಕಾಂತರಾಜ್ ರವರ ಮಾರ್ಗದರ್ಶನ ಅತ್ಯವಶ್ಯಕವಾಗಿದ್ದು, ಯುವ ಸಮುದಾಯ ಕಾಂತರಾಜ್ ರವರ ಕಡೆ ಚಿತ್ತ ಹರಿಸಬೇಕಾಗಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ.ಚಿಕ್ಕ ಮಂಗಳೂರು.