ಶ್ರೀಮತಿ ದೀನಾ ಮಂಜುನಾಥ ರವರನ್ನು ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ.

ಕೂಡ್ಲಿಗಿ (ಫೆಬ್ರುವರಿ.7) :

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೊದಲ ಬಾರಿಗೆ ಶ್ರೀ ಮತಿ ದೀನಾ ಮಂಜುನಾಥ ರವರು ಬಡೇಲಡಕು ಎಸ್.ಸಿ ಮೀಸಲು ಕ್ಷೇತ್ರದ ಝೆಡ್ ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜನರ ಆಶೀರ್ವಾದ ಪಡೆದು ಕೊಂಡು ಗೆಲುವನ್ನು ತನ್ನಗಿಸಿಕೊಂಡು ಶ್ರೀಮತಿ ದೀನಾ ಮಂಜುನಾಥ ರವರು ಬಿ.ಜೆ.ಪಿ ಪಕ್ಷದ ವರಿಷ್ಠರ ಪ್ರಮುಖ ಮುಖಂಡರ ಬಲದಿಂದ ಬಳ್ಳಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಸುಮಾರು ದಿನಗಳ ನಂತರ ಬಳ್ಳಾರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಹಾಗೂ ಉಪಾಧ್ಯಕ್ಷರಾಗಿ ಪಕ್ಷದ ಸಿದ್ಧಾಂತಗಳೊಂದಿಗೆ ಜನಪರ ಅಭಿವೃದ್ಧಿಯ ಕಾರ್ಯಗಳನ್ನು ಮಾಡುವುದರೊಂದಿಗೆ ಕಾರ್ಯನಿರ್ವಹಿಸಿ ಭಾರತೀಯ ಜನತಾ ಪಕ್ಷದ ರಾಜ್ಯ ಮಟ್ಟದ ಪ್ರಮುಖ ರಾಜಕೀಯ ಮುಖಂಡರುಗಳ ಸಲಹೆಗಳೊಂದಿಗೆ ತಮ್ಮ ಜಿಲ್ಲಾಪಂಚಾಯತ ಐದು ವರ್ಷದ ಅಧಿಕಾರವನ್ನು ಸಂಪೂರ್ಣವಾಗಿ ಮುಗಿಸಿ ಹಿಂದಿನಾ ಬಳ್ಳಾರಿ ಜಿಲ್ಲೆಯ 8 ತಾಲೂಕುಗಳಿಗೆ ತಮ್ಮ ಅವಧಿಯಯಲ್ಲಿ ಉತ್ತಮವಾದ ಜನಪರ ಅಭಿವೃದ್ದಿಯ ಕೆಲಸಗಳನ್ನು ಮಾಡಿ ಉತ್ತಮ ಹೆಸರನ್ನು ಗಳಿಸಿರುವ ಶ್ರೀ ಮತಿ ದೀನಾ ಮಂಜುನಾಥ ರವರನ್ನು ಅವಳಿ ಜಿಲ್ಲೆ ಯಾಗಿರುವ ವಿಜಯ ನಗರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ವರಿಷ್ಠರು ಹಾಗೂ ಜಿಲ್ಲಾಧ್ಯಕ್ಷರು ಶ್ರೀಮತಿ ದೀನಾ ಮಂಜುನಾಥ ಇವರನ್ನು ಪಕ್ಷವು ಗುರುತಿಸಿ ಕೇಲವರು ಪಕ್ಷದ ಜವಾಬ್ದಾರಿ ಸ್ಥಾನವನ್ನು ನೀಡಿ ನೂತನ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷವು ಆದೇಸಿದೆ,

ಈ ಮೂಲಕ ಶ್ರೀ ಮತಿ ದೀನಾ ಮಂಜುನಾಥ ರವರು ರಾಜ್ಯದ ಅನೇಕ ಗಣ್ಯರು ಹಾಗೂ ಬಳ್ಳಾರಿ ವಿಜಯನಗರ ಜಿಲ್ಲೆಗಳನ್ನು ಹೊರತು ಪಡಿಸಿ ಅಕ್ಕ ಪಕ್ಕದ ಜಿಲ್ಲೆಗಳಲ್ಲೂ ಇವರ ಸ್ನೇಹ ಬಳಗದೊಂದಿಗೆ ಒಡನಾಟದಲ್ಲಿ ಇದ್ದು ಇರುವರನ್ನು ಈ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಇವರ ಅಭಿಮಾನಿಗಳು ಎಸ್.ಸಿ ಕ್ಷೇತ್ರದ ರಾಯಚೂರು ಜಿಲ್ಲೆಯ ಲಿಂಗಸಗೂರು, ಕೊಪ್ಪಳ ಜಿಲ್ಲೆಯ ಕನಕಗಿರಿ, ಚುನವಣೆ ಸ್ಪರ್ಧೆಸಲು ಕೂಗು ಕೇಳಿ ಬಂದಿದ್ದು ಸಾಕ್ಷಿಯಾಗಿದೆ, ಆದ್ದರಿಂದ ಶ್ರೀ ಮತಿ ದೀನಾ ಮಂಜುನಾಥ ಇವರು ಕೂಡ್ಲಿಗಿ ತಾಲೂಕಿನ ಜನತೆಗೂ ಜಿಲ್ಲೆಯ ಪಕ್ಷದ ಎಲ್ಲಾ ಪ್ರಮುಖ ಮುಖಂಡರಿಗೂ ಹಾಗೂ ಭಾಜಪ ಕಾರ್ಯಕರ್ತರಿಗೂ ಅಭಿಮಾನಿ ಬಳಗಕ್ಕೂ ಧನ್ಯವಾದಗಳು ತಿಳಿಸಿರುತ್ತಾರೆ.

ಜಿಲ್ಲಾ ವರದಿಗಾರರು: ರಾಘವೇಂದ್ರ.ಬಿ.ಸಾಲುಮನೆ.
ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button