ಲಿಂಗ ಪೂಜೆಯಿಂದ ದಿಟ್ಟ ನಿರ್ಧಾರ ಮತ್ತು ತ್ಯಾಗ ಮನೋಭಾವಣೆ ಬರಲಿದೆ – ಗುರು ಮಹಾಂತ ಶ್ರೀಗಳು.
ಹುನಗುಂದ ಮೇ.19

ಲಿಂಗ ಪೂಜೆಯಿಂದ ದಿಟ್ಟ ನಿರ್ಧಾರ ಮತ್ತು ತ್ಯಾಗ ಮನೋಭಾವನೆ ಪ್ರತಿಯೊಬ್ಬರಲ್ಲಿ ಬರಲು ಸಾಧ್ಯ ಎಂದು ಚಿತ್ತರಗಿ ಸಂಸ್ಥಾನಮಠ ಹುನಗುಂದದ ಗುರು ಮಹಾಂತ ಶ್ರೀಗಳು ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ನಡೆದ ಶರಣ ಮಹೋತ್ಸವದ ೩ ನೇ. ದಿನದಂದು ಬೆಳಿಗ್ಗೆ ರಂಗೋಲಿ ಮತ್ತು ತಳಿರು ತೋರಣಗಳಿಂದ ಶೃಂಗರಗೊಂಡ ಪಟ್ಟಣದ ಪ್ರತಿ ಗಲ್ಲಿಗಳಲ್ಲಿ ನಡೆಸಿದ ಪಥ ಸಂಚಲನ ನಡೆದು ವಿಮ ವೃತ್ತದಲ್ಲಿ ನಿರ್ಮಿಸಿದ ಲಿಂ. ವಿಜಯ ಮಹಾಂತ ಶಿವಯೋಗಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಸವ ಮಂಟಪ ತಲುಪಿ ನಂತರ ಸಾಮೂಹಿಕ ಲಿಂಗ ಪೂಜೆ ನೆರವೇರಿಸಿ ಪೂಜೆಯ ವಿಧಿ-ವಿಧಾನ ಮತ್ತು ಅದರಿಂದಾಗುವ ಆರೋಗ್ಯ,ಮನಸ್ಸು, ನೆಮ್ಮದಿ ಹಾಗೂ ಎಲ್ಲಾ ಬಗೆಯ ಭಾಗ್ಯಗಳು ಲಭಿಸುವ ಕುರಿತು ಶ್ರೀಗಳು ತಿಳಿಸಿದರು. ನಗರದ ವಿಮ ಕಾಲೇಜ ಪ್ರಾಚಾರ್ಯ ಎಚ್.ಎಸ್. ಬೋಳಿಶಟ್ಟರ, ಉಪನ್ಯಾಸಕಿ ಡಾ. ನಾಗರತ್ನಾ ಭಾವವಿಮಟ್ಟಿ, ಡಾ. ಶಿವಗಂಗಾ ರಂಜಣಗಿ, ನಿವೃತ್ತ ಶಿಕ್ಷಕ ಮಹಾಂತೇಶ ತೆನಹಳ್ಳಿ, ಶಿವಬಸವ ಅಂಗಡಿ, ಮುತ್ತಕ್ಕ ಭಾವಿಕಟ್ಟಿ, ಶಿಕ್ಷಕ ಮಲ್ಲಿಕಾರ್ಜುನ ದರಗಾದ ಸೇರಿದಂತೆ ಬಹುತೇಕ ಭಕ್ತರು ಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸಾಮೂಹಿಕ ಲಿಂಗಧಾರಣೆ ನಡೆಯಿತು. ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಅರುಣೋದಯ ದುದ್ಗಿ,ಶಿವಪ್ಪ ನಾಗೂರ,ರವಿ ಹುಚನೂರ,ಸಂಗಪ್ಪ ಹೂಲಗೇರಿ,ನಾರಾಯಣ ಇಳಗೇರಿ,ಮಲ್ಲು ದರಗಾದ,ವೀರೇಶ ಕುರ್ತಕೋಟಿ,ಲಿಂಬಣ್ಣ ಮುಕ್ಕಣ್ಣವರ,ರಾಜು ಬಯ್ಯಾಪೂರ,ಬಸವರಾಜ ಗೊಣ್ಣಾಗರ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.ಪಥ ಸಂಚಲನದಲ್ಲಿ ದುಡ್ಡು ದುಗ್ಗಾಣಿಯನ್ನು ಕೇಳದ ಶ್ರೀಗಳು ಭಕ್ತರ ದುಶ್ಚಟಗಳನ್ನು ಜೋಳಿಗೆಗೆ ಪಡೆದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.