ಸಹಕಾರ ಮನೋಭಾವದಿಂದ ನಮ್ಮ ಮತ್ತು ಸಾರ್ವಜನಿಕರ ವಿಶ್ವಾಸ ಕರೆ.

ಕೂಡ್ಲಿಗಿ ಜೂನ್.17

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ದಿನಾಂಕ17/06/2023 ರಂದು ಪ್ರವಾಸಿ ಮಂದಿರದಲ್ಲಿ ತಾಲೂಕು‌ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಕಾರ್ಯದರ್ಶಿಗಳ ಸಭೆಯಲ್ಲಿ ಆಯ್ಕೆ ಮಾಡಲು ಸಂಘವನ್ನು ಪುನಃ ರಚನೆ ಮಾಡಲಾಗಿತ್ತು .ಈ ಸಂದರ್ಭದಲ್ಲಿ ಟಿ.ವೀರೇಶ್ ರಾಜ್ಯ ಶಿಸ್ತು ಸಮಿತಿಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪಾಧ್ಯಕ್ಷರು ವಿಜಯನಗರ ಜಿಲ್ಲೆ ಇವರ ನೇತೃತ್ವದಲ್ಲಿ ಕೂಡ್ಲಿಗಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಸಭೆಗೆ ಹಾಜರಿದ್ದು.ಈ ಸಂದರ್ಭದಲ್ಲಿ ವೀರೇಶ್ ಗ್ರಾಮಾ ಆಡಳಿತ ಅಧಿಕಾರಿ ಉರುಳಿಹಾಳ್ ಇವರು ಸಂಘದ ಉದ್ದೇಶನ್ನು ಪದಾಧಿಕಾರಿಗಳಿಗೆ ತಿಳಿಸುವುದರೊಂದಿಗೆ ಸಾರ್ವಜನಿಕರಿಗೆ ಸರ್ಕಾರದ ಕೆಲಸವನ್ನು ಆಯಾ ಗ್ರಾಮಗಳ ರೈತರಿಗೆ ಗ್ರಾಮದ ಜನರಿಗೆ ನಾವುಗಳು ಉತ್ತಮವಾದ ಸೇವೆ ಮಾಡುವುದು ಎಲ್ಲಾ ಜನರು ನಮ್ಮ ಜೊತೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಕೈಜೋಡಿಸಿ ತಮ್ಮ ತಮ್ಮ ಕೆಲಸಗಳನ್ನು ಪೂರೈಸಿ ಕೊಳ್ಳಲು ಸಹಕಾರ ಮನೋಭಾವದಿಂದ ನಮ್ಮ ಮತ್ತು ಸಾರ್ವಜನಿಕರ ವಿಶ್ವಾಸ ಬೆಳೆಸಿಕೊಳ್ಳಲು ಕರೆ ನೀಡಿದರು.

ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮರುಳಸಿದ್ದಪ್ಪ ಎನ್ ಯು ,ಗೌರವಾಧ್ಯಕ್ಷರಾಗಿ ಚನ್ನಬಸಯ್ಯ ಎಸ್ ಎಂ, ಕಾರ್ಯದರ್ಶಿ ಯಾಗಿ ಇಮ್ರಾನ್ ,ಹೆಚ್ ಎಂ,ಖಜಾಂಚಿಯಾಗಿ ನವೀನ್ ಯು ,ಉಪಾಧ್ಯಕ್ಷ ರಾಗಿ ಶ್ರೀನಿವಾಸ ಕೊಂಡಿ, ಮಹಿಳಾ ಉಪಾಧ್ಯಕ್ಷ ರಾಗಿ ಶ್ರೀಮತಿ ಶೋಭಾ ,ಹಾಗೂ ಇತರ ಪದಾಧಿಕಾರಿಗಳು ಆಯ್ಕೆ ಯಾದರು ಈ ಸಂಧರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.ನಂತರ ತಾಲೂಕು ಕಛೇರಿಗೆ ಆಗಮಿಸಿ ಮಾನ್ಯ ತಹಶೀಲ್ದಾರರಾದ ಟಿ.ಜಗಧೀಶರವರು ನೂತನ ಅಧ್ಯಕ್ಷ ಮರುಳು ಸಿದ್ದಪ್ಪ ಎನ್.ಇವರಿಗೆ ಹೂ ಮಾಲೆ ಹಾಕಿ ಶುಭಾ ಹಾರೈಸಿದರು.

ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button