ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕುಸ್ತಿಯಲ್ಲಿ – ಭೈರಪ್ಪ.ಬನ್ನೆ ಪ್ರಥಮ ಸ್ಥಾನ.
ಚಿಕ್ಕ ಅಲ್ಲಾಪುರ ಮೇ. 20

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳು – 2025 ರಲ್ಲಿ ಸಿಂದಗಿ ತಾಲ್ಲೂಕಿನ ಗೋಲಗೇರಿ ಕ್ಲಸ್ಟರ್ ಮಟ್ಟದ ಚಿಕ್ಕ ಅಲ್ಲಾಪುರ ಶಾಲೆಯ ಮುಖ್ಯ ಗುರುಗಳಾದ ಭೈರಪ್ಪ.ಬನ್ನೆ ಅವರು 40 ವರ್ಷ ಮೇಲ್ಪಟ್ಟ ವಿಭಾಗದ ಪುರುಷರ 82. KG ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ಶಿಕ್ಷಕರ ಸಾಧನೆಗೆ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಬಿ ಯಡ್ರಾಮಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಆಯ್.ಎಸ್ ಟಕ್ಕೆ, ಗೋಲಗೇರಿ ಕ್ಲಸ್ಟರ್ ಮಟ್ಟದ ಅಧಿಕಾರಿ ಶರಣು.ಚಟ್ಟಿ ಹಾಗೂ ಚಿಕ್ಕ ಅಲ್ಲಾಪೂರ ಶಾಲೆಯ ಶಿಕ್ಷಕರಾದ ಎಸ್.ಎಮ್ ನದಾಫ್ ಮಡಿವಾಳ. ನಾಯ್ಕೋಡಿ ಸೇರಿದಂತೆ ಚಿಕ್ಕ ಅಲ್ಲಾಪೂರ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಗ್ರಾಮಸ್ಥರು ಸೇರಿದಂತೆ ಶಿಕ್ಷಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ