ನ್ಯಾಯಾಲಯದಲ್ಲಿ ವಿಶ್ವ ಮಹಿಳಾದಿನಾಚರಣೆ ಆಚರಿಸಲಾಯಿತು

ವಿಜಯನಗರ ( ಮಾರ್ಚ್).:12

ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದಲ್ಲಿ, ವಿಶ್ವ ಮಹಿಳಾದಿನಾಚರಣೆ ಆಚರಿಸಲ‍ಾಯಿತು. ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ. ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ, ಕಾನೂನು ಅರಿವು ನೆರವು ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು‌, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಅಬಲೆಳಲ್ಲ ಸಭಲಳು, ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಬಲ್ಲಳು. ತೊಟ್ಟಿಲು ತೂಗುವ ಕೈ ದೇಶವನ್ನೇ (ತೂಗಬಲ್ಲದು) ಆಳಬಲ್ಲುದು, ಎಂಬ ನಾಣ್ಣುಡಿಯಂತೆ ಮಹಿಳೆ ಸರ್ವತೋಮುಖ ಬಲಿಷ್ಠಳು ಎಂದರು. ಹಿರಿಯ ಮಹಿಳಾ ನ್ಯಾಯವಾದಿ ಕೆ.ಹೆಚ್.ಎಂ. ಶೈಲಜಾ ರವರು, ಅಂತಾರಾಷ್ಟ್ರೀಯ ದಿನಾಚರಣೆ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿವಿಲ್ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಘೇಂದ್ರ ತುಬಾಕಿಯವರು ವಹಿಸಿದ್ದರು. ಸರ್ಕಾರಿ ಅಪರ ವಕೀಲರಾದ ಶಿವಪ್ರಸಾದಗೌಡ, ವಕೀಲರಸಂಘ ಅಧ್ಯಕ್ಷ ಜಿ.ಹೊನ್ನೂರಪ್ಪ,ಹಿರಿಯ ಮಹಿಳಾ ವಕೀಲರಾದ ಸಾವಿತ್ರಿಬಾಯಿ. ಮಹಿಳಾ ವಕೀಲರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸರ್ವಸದಸ್ಯರು, ನ್ಯಾಯಾಲಯದ ಮಹಿಳಾ ಸಿಬ್ಬಂದಿ ಸೇರಿದಂತೆ ಎಲ್ಲ‍ಾ ಸಿಬ್ಬಂದಿಯವರು ನಾಗರೀಕರು, ವಿವಿದ ಇಲಾಖೆಗಳ ಸಿಬ್ಬಂದಿಯವರು, ಮಹಿಳೆಯರು ಉಪಸ್ಥಿತರಿದ್ದರು

*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button