ಶ್ರೀ ಶರಣಬಸವೇಶ್ವರ ರಥೋತ್ಸವದ ಪ್ರಯುಕ್ತ – ಶಾಂತಿ ಸಭೆ.
ಕಾನಮಡುಗು ಡಿ.09

ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಕಾನಮಡುಗು ಗ್ರಾಮದಲ್ಲಿ ದಿನಾಂಕ 09-12-2024 ರಿಂದ 11-12-2024 ವರೆಗೆ ನಡೆಯಲಿರುವ ಶ್ರೀ ಶರಣಬಸವೇಶ್ವರ ರಥೋತ್ಸವದ ಪ್ರಯುಕ್ತ ಭಾನುವಾರ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ಜರಿಗಿತು. ಈ ಶಾಂತಿ ಸಭೆಯಲ್ಲಿ ಕೊಟ್ಟೂರು ವೃತ್ತದ ಸಿ.ಪಿ.ಐ ವೆಂಕಟಸ್ವಾಮಿ ಯವರು ಮಾತನಾಡಿ, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಇಸ್ಪೀಟು ಜೂಜು, ಮಧ್ಯಪಾನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ, ಅಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.

ಪ್ರತಿಯೊಬ್ಬ ನಾಗರಿಕರು, ಊರಿನ ಗ್ರಾಮಸ್ಥರು ಮುಖಂಡರು ರಥೋತ್ಸವದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಆಗದಂತೆ ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಐಕ್ಯತೆ ಯಿಂದ ಶ್ರೀ ಶರಣಬಸವೇಶ್ವರ ರಥೋತ್ಸವದ ಕಾರ್ಯಕ್ರಮಗಳನ್ನು ನಡೆಸಿ ಶರಣೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಿ, ಇಂತಹ ಕಾರ್ಯಕ್ರಮಗಳಿಗೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ ನಮ್ಮ ಇಲಾಖೆಯೂ ಕೂಡ ನಿಮ್ಮ ಜೊತೆಯಲ್ಲಿ ಇರುತ್ತದೆ. ಕಾರಣ ಪ್ರತಿಯೊಬ್ಬರೂ ಶಾಂತಿಯಿಂದ ಜಾತ್ರೆಯನ್ನು ಆಚರಣೆ ಮಾಡಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮುಡಿ. ಶರಣಾರ್ಯರು ಮಾತನಾಡಿ ನಾಡಿನಾದ್ಯಂತ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದ ರಿಂದ ಪ್ರತಿ ವರ್ಷದಂತೆ ಗ್ರಾಮಸ್ಥರು, ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ರೊಂದಿಗೆ ಸಹಕರಿಸಿರಿ ಎಂದು ಈ ಶಾಂತಿ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ, ಕಾನ ಹೊಸಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಸಿದ್ದರಾಮ ಬಿದರಾಣಿ ಮತ್ತು ಪೊಲೀಸ್ ಸಿಬ್ಬಂದಿ. ಕಾನ ಮಡಗು ನಿವೃತ್ತ ಶಿಕ್ಷಕ ತಳವಾರ ಶರಣಪ್ಪ, ಶಿಕ್ಷಕ ನೀರಗಂಟಿ ಶರಣಪ್ಪ. ಬಿ ಚನ್ನಪ್ಪ, ಎಂ ತಿಪ್ಪೇಸ್ವಾಮಿ, ಅಜ್ಜನಗೌಡ. ಎಮ್ ಶರಣಪ್ಪ. ಗ್ರಾಮ ಪಂಚಾಯತ್ ಅಧ್ಯಕ್ಷರು ಉಮಾದೇವಿ ಅಂಜಿನಪ್ಪ .ಸದಸ್ಯರು ಅಂಜಿನಪ್ಪ ದಿನೇಶ್. ಬೋರಪ್ಪ ಹನುಮಂತಪ್ಪ. ಮಂಜುನಾಥ್. ಗಂಗಮ್ಮ ಶರಣಪ್ಪ. ಪಿ ಜಯರಾಜ್.ಬಿ ರುದ್ರಪ್ಪ,ಸೋಮಶೇಖರ್ ನಿವೃತ್ತ ಶಿಕ್ಷಕರು. ಎಚ್ ದುರ್ಗಪ್ಪ ಎನ್ ಪಕೀರಪ್ಪ ದುಗ್ಗಪ್ಪ. ಎಂ ತಿಪ್ಪೇಸ್ವಾಮಿ ಆಲೂರು ಗ್ರಾಮ ಪಂಚಾಯತಿ ಪಿ.ಡಿ.ಓ ವಿನಯ ಕುಮಾರ್. ಸಿಬ್ಬಂದಿ. ಹಾಗೂ ಕಾನ ಮಡಗು ಗ್ರಾಮದ ದೈವಸ್ಥರು, ಮುಖಂಡರು ದಲಿತಕೇರಿಯ ಮುಖಂಡರು, ಗ್ರಾಮಸ್ಥರು ಸಾರ್ವಜನಿಕರು ಉಪಸಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ