ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧ ಉಜ್ಜಿನಿ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ
ಕೊಟ್ಟೂರು ಏ.25

ಪಂಚಪೀಠಗಳಲ್ಲಿ ಒಂದಾಗಿರವ ನಾಡಿನ ಪ್ರಸಿದ್ದ ಉಜ್ಜಿನಿ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯತಾ ಪಡೆದರು.
ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ರಥೋತ್ಸವದ ಕಾರ್ಯಕ್ರಮದಲ್ಲಿ ಮೊದಲು ಸ್ವಾಮಿಯ ಉತ್ಸವಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾನ ಮಾಡಲಾಯಿತು.

ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತ ರಥವನ್ನು ಮುಂದೆ ಎಳೆದುಕೊಂಡು ಹೋದರು. ನಂತರ ಪಾದಗಟ್ಟೆ ಮುಟ್ಟಿ ಶ್ರೀ ಸ್ವಾಮಿಯ ಪೂಜೆ ಸಲ್ಲಿಸಿ ಮತ್ತೆ ಮರಳಿ ಬಂದು ನೆಲೆ ನಿಲ್ಲಿಸಲಾಯಿತು.
2023ರ ಚುನಾವಣೆ ನೀತಿ ಸಂಹಿತಿ ಇರುವುದರಿಂದ ರಥೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ವಿಶೇಷವಾಗಿ 300 ಪೊಲೀಸ್ 4 ಡಿವೈಎಸ್ಪಿ 8 ಇನ್ಸ್ಪೆಕ್ಟರ್ 26 ಸಬ್ ಇನ್ಸ್ಪೆಕ್ಟರ್ ಗಳಿದ್ದು ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಹರಿಬಾಬು ಎಸ್ ಪಿ ವಿಜಯನಗರ ಜಿಲ್ಲೆ ವೆಂಕಟಸ್ವಾಮಿ ಸಿಪಿಐ ವೆಂಕಟೇಶ್ ಪಿಎಸ್ಐ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಕಲ ಭಕ್ತಾದಿಗಳು ಸೇರಿದ್ದರು
ತಾಲೂಕ ವರಗಾರರು : ಪ್ರದೀಪ್. ಕುಮಾರ್ ಸಿ. ಕೊಟ್ಟೂರು