ಬುಡ್ಡೆಕಲ್ಲಿಗೆ ಪೂಜೆ ಮಾಡಿ ಮಳೆರಾಯನಿಗಾಗಿ ಪ್ರಾರ್ಥನೆ.
ನಿಂಬಳಗೆರೆ ಜೂನ್.20

ಕೊಟ್ಟೂರು ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು ಸೇರಿ ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಿದರು. ಕರ್ನಾಟಕದಲ್ಲಿ ಈ ವರ್ಷದಲ್ಲಿ ಮುಂಗಾರು ಮಳೆ ಕೆಲವು ಕಡೆ ಆಗಿದೆ, ಕೆಲವು ಕಡೆ ಆಗಿಲ್ಲ ಕೆಲ ರೈತರು ಬಿತ್ತನೆ ಮಾಡಿ ಮಳೆರಾಯನಗಾಗಿ ಕಾಯುತ್ತಿದ್ದಾರೆ ಈ ವರ್ಷ ಏಕೆ ಹೀಗಾಗಿದೆ ಎಂದು ಕಂಗಾಲಾದ ಎಲ್ಲಾ ಹಳ್ಳಿಯ ರೈತರು ಮಳೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ನಿಂಬಳಗೇರಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಯುವಕ, ಯುವತಿಯರು ಸೇರಿ ಊರ ಮುಂದಿನ ಬುಡ್ಡೆಕಲ್ಲಿಗೆ ನೂರ ಒಂದು ಕೊಡ ನೀರು ಸುರಿದು ಬಾರಯ್ಯ ಮಳೆ ರಾಯ ಎಂದು ಪ್ರಾರ್ಥಿಸುತ್ತ ಬುಡ್ಡೆಕಲ್ಲಿಗೆ ಸಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿದರು.

ಇತ್ತೀಚೆಗೆ ಬಂದಿದ್ದ ಅಲ್ಪ ಸ್ವಲ್ಪ ಮಳೆಗೆ ಅನೇಕ ರೈತರು ಜೋಳ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ಬಿತ್ತಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ಮಳೆ ಕಾಣೆಯಾಗಿದ್ದು, ಬಿಸಿಲಿನ ಬೇಗೆ ಹೆಚ್ಚಾಗಿದ್ದು. ಇದರಿಂದ ಬಿತ್ತನೆ ಮಾಡಿದ್ದ ಬೆಳೆಗಳು ಬಾಡಲಾರಂಭಿಸಿವೆ. ಇದರಿಂದ ಗ್ರಾಮದ ಎಲ್ಲಾ ಜನರು ಸೇರಿ ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ. ಕೊಟ್ಟೂರು