ನಗರ ಸಭೆಯಲ್ಲಿ ದಾಖಲೆಗಳು ಕಾಣೆ ಪ್ರಭಾವಿಗಳೇ ಹೊತ್ತೊಯ್ದ ಬಗ್ಗೆ ಪತ್ರ.

ಹೊಸಪೇಟೆ ಆಗಷ್ಟ.29

ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಶ್ ವಾದಿ) ವತಿಯಿಂದ ಹೊಸಪೇಟೆ ನಗರಸಭೆಗೆ ಕಚೇರಿಗೆ ಆಗಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಮನವಿ ಪತ್ರವನ್ನು ಸಲ್ಲಿಸಲು ಬಂದ ಪ್ರತಿಭಟನಾ ಕಾರರಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡದ ನಗರ ಸಭಾ ಆಯುಕ್ತರು ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಈ ಕೂಡಲೇ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿಬೇಕೆಂದು ಹೇಳಿದರು ಇಲ್ಲವಾದಲ್ಲಿ ನಗರಸಭೆಗೆ ಬೀಗ ಹಾಕುತ್ತೇವೆ ಎಂದು ಒತ್ತಾಯಿಸಿದರು. ನಗರ ಸಭೆಯ ರೆಕಾರ್ಡ್ ರೂಮ್ ಸಿಬ್ಬಂದಿ ಡಿ.ಹೆಚ್‌ ಸುರೇಶ್ ಭಾಬು ಇವರು ದಿನಾಂಕ: 10.08.2023ರಂದು ತಮಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಕೆಯಲ್ಲಿ ಹೊಸಪೇಟೆ ನಗರ ಸಭೆಯಲ್ಲಿದ್ದ 49 ಮೇಲ್ಪಟ್ಟು ರಿ.ಜಿ/ಸ‌ ಮತ್ತು ಇನ್ನಿತರ ದಾಖಲೆಗಳನ್ನು ಹಾಡುಹಗಲೇ ನಗರ ಸಭೆಯ ಸಿ.ಸಿ.ಕ್ಯಾಮರಾಗಳನ್ನುಬಂದ ಮಾಡಿ ನಗರಸಭೆಯ ಅಧಿಕಾರಿಗಳ ಎದರುಗುಡೆಯೇ ರಾಜಕೀಯ ಅಧಿಕಾರದ ದರ್ಪ ಮತ್ತು ದೌರ್ಜನ್ಯದಿಂದ ಮಾಜಿ ಸಚಿವರಾದ ಶ್ರೀ ಆನಂದ್ ಸಿಂಗ್ ಅವರ ಕುಟುಂಬದ ಸಂದೀಪ್ ಸಿಂಗ್ ಇವರು ಕದ್ದ್ಯೋದಿರುವ ಬಗ್ಗೆ ತಮಗೆ ತಿಳಿಸಿದ್ದಾರೆ. ಈ ಅಕ್ರಮ ಕೆಲಸಕ್ಕೆ ಕೆಲವು ನಗರ ಸಭಾ ಸದಸ್ಯರು ಮತ್ತು ಹಿಂದಿನ ನಗರ ಸಭಾ ಆಯುಕ್ತರು ಮತ್ತು ಅಧಿಕಾರಿಗಳು ಸಹಕರಿಸಿದ್ದಾರೆ. ಹಾಗೂ ಶಾಮೀಲು ಆಗಿದ್ದಾರೆಂದು ತಿಳಿಸಿದ್ದಾರೆ. ಹಾಗೆಯೇ ನಗರ ಸಭಾ ಕಾರ್ಯಾಲಯದ ಮೇಲೆ ಯಾವುದೇ ಮುನ್ಸೂಚನೆ ನೀಡದೇ ರೈಡ್ ಮಾಡಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ತಮಗೆ ಸಲ್ಲಿಸಿದ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.ಈ ಪತ್ರ ಬಹಿರಂಗವಾಗಿ ಬೆಳಕಿಗೆ ಬಂದ ತಕ್ಷಣ ಹೊಸಪೇಟೆ ತಾಲೂಕಿನಲ್ಲಿ ಮತ್ತುವಿಜಯನಗರ ಜಿಲ್ಲೆಯಲ್ಲಿನ ಜನರಲ್ಲಿ ಆತಂಕ ಮತ್ತು ಭಯ ಉಂಟಾಗಿದೆ. ನಗರ ಸಭೆಯ ಕೆಲವು ಅಧಿಕಾರಿಗಳಲ್ಲಿ ಮತ್ತು ಸದಸ್ಯರಲ್ಲಿ ಬಂಧನದ ಭೀತಿ ಉಂಟಾಗಿದೆ, ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕುವದೂರು ಸಲ್ಲಿಸಿದ ವ್ಯಕ್ತಿಯನ್ನು ಬೆದರಿಸುವ, ಆತನಿಂದಲೇ ಈ ಪ್ರಕರಣದ ವಿರುದ್ಧ ಹೇಳಿಕೆ ಕೊಡಿಸಲು ಗಂಭೀರ ಪ್ರಯತ್ನಗಳು ನಡೆದಿವೆ. ಕಳೆದವಾರವೇ ನಗರ ಸಭೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಬಿ.ಟಿ.ಬಂಡಿ ವಡ್ಡ‌ರ್ ಇವರು ನಗರಸಭೆಯಲ್ಲಿ ದಾಖಲೆಗಳು ಕಳ್ಳತನವಾಗಿವೆ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ.

ಮತ್ತೊಮ್ಮೆ ನಾನು ದಾಖಲೆಗಳನ್ನು ನೋಡಿಲ್ಲ. ನಮ್ಮ ಅಧಿಕಾರಿಗಳು ಕಳ್ಳತನ ಆಗಿಲ್ಲವೆಂದು ಹೇಳುತ್ತಿರುವುದು ಆಗಿಲ್ಲವೆಂದು ಪತ್ರಿಕೆಗಳ ಮುಂದೆ ಹೇಳಿಕೆ ಕೊಡುತ್ತಿದ್ದಾರೆ. ದಾಖಲೆಗಳನ್ನು ತೋರಿಸಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೌನವಹಿಸಿರುತ್ತಾರೆ. ಮತ್ತು ಮುಂದಿನ ದಿನದಲ್ಲಿ ಎಲ್ಲವನ್ನು ಬಹಿರಂಗ ಪಡಿಸುತ್ತೇನೆಂದು ಚಡಪಡಿಸುತ್ತಾರೆ.ಈ ಎಲ್ಲಾ ವಾಸ್ತವಾಂಶಗಳನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಸಾವಿರಾರು ಕೋಟಿ ರೂಪಾಯಿ ಬೆಲೆಗೆ ಸಂಬಂಧಿಸಿದ ಸ್ಥಿರಾಸ್ತಿಗಳು ಮತ್ತು ಬೆಲೆ ಬಾಳುವ ಸರ್ಕಾರಿ ಹಾಗೂ ನಗರ ಸಭೆಯ ಜಮೀನುಗಳು ಕಾರ್ಖಾನೆಗಳು ಸರ್ಕಾರದ ನಡುವೆ ಆಗಿರುವ ತಾತ್ಕಾಲಿಕ ಗುತ್ತಿಗೆ ಒಪ್ಪಂದದ ಜಮೀನುಗಳು ದಾಖಲೆಗಳು ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್ ರಿಜಿಸ್ಟ‌ಗಳು, ಎಂ ಆರ್ 19 ರಿಜಿಸ್ಪರ್‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್ ರಿಜಿಸ್ಟರ್‌ಗಳ ಕಾರ್ಡ್ ನಂಬರ್ 35ರಲ್ಲಿ ಎಂ ಆರ್ 19, ವ್ಯಾಲರಿ ನಂ -2, 03, 05, 06, ವಾರ್ಡ್ ನಂಬರ್ 35 ಜಂಬುನಾಥನಹಳ್ಳಿ ಎಂ ಆರ್ 26 ವ್ಯಾಲು ನಂ 15, ಕೆಎಂಎಫ್ Jeseo 30 32, 33, 34,35, 36, 38, 39, ವಾರ್ಡ್ ನಂಬರ್ 8ರಲ್ಲಿ ಎಂ ಆರ್26 ನಂ 0 30 03, 18, 21, 82, 95, ರಜ್ಯೂಲೇಷನ್ ರಿಜಿಸ್ಟರ್ 1990-91ರಿಂದ 1992-93, ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಡಿಮ್ಯಾಂಡ್ ರಿಜಿಸ್ಟರ್ ವ್ಯಾಲಂ 01, 04, 02. ಸಂಕ್ಲಾಪುರ ರಿಜಿಸ್ಟರ್ ವ್ಯಾಲರಿ ನಂ 02. ಅಮರಾವತಿ ಪುರಸಭೆ ಎಂ ಆ‌ 5019, que o 01.02 ವಾರ್ಡ್ 5, ವ್ಯಾಲಂ 01 ಸೇರಿದಂತೆ ಒಟ್ಟು 40 ಕಡತಗಳ ರಿಜಿಸ್ಟರ್‌ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸುರೇಶ್ ಬಾಬು ಎಂಬ ಹೆಸರಿನಲ್ಲಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಈಗಾಗಲೇ ನಗರ ಸಭೆ ಮತ್ತು ಸರ್ಕಾರದ ಒಡೆತನದ ಭೂ ಒತ್ತುವರಿ ಅಕ್ರಮಗಳನ್ನು ಕೆಲವು ನಗರಸಭೆಯ ಸದಸ್ಯರಿಂದ ಮತ್ತು ಮಾಜಿ ಸಚಿವ ಆನಂದ್ ಸಿಂಗ್ ಇವರಿಂದ ನಡೆದಿರುವ ಪ್ರಕರಣಗಳು ಇನ್ನೂ ಜಿಲ್ಲಾಧಿಕಾರಿಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ.ಆದ್ದರಿಂದ ಇಡೀ ಪ್ರಕರಣ ಮುಚ್ಚಿ ಹೋಗುವ ಮೊದಲು, ಅಮಾಯಕ ಸಿಬ್ಬಂದಿ ಬಲಿಯಾಗುವ ಮೊದಲು, ಹೊಸಪೇಟೆ ಮತ್ತು ವಿಜಯನಗರ ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಲು ಉಲ್ಲೇಖಿತ ಪತ್ರದ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿ.ಓ.ಡಿ., ಎಸ್.ಐ.ಟಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು ಸಂಘಟನೆಯ ಮುಖಂಡರು ಜಂಬಯ್ಯ ನಾಯಕ್, ಆರ್ ಭಾಸ್ಕರ್ ರೆಡ್ಡಿ, ಗೋಪಾಲ್, ತಾಯಪ್ಪ ನಾಯಕ್, ಹಾಗೂ ಕಾರ್ಯದರ್ಶಿಗಳು ಸದಸ್ಯರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button