ತುಂಗಭದ್ರಾ ನದಿಯ ಗುಂಡಾ ಫಾರೆಸ್ಟ್ ಬಳಿ‌ ನಡೆದ ಘಟನೆಯಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ – ನಾಲ್ಕು ಲಕ್ಷದ ಮೌಲ್ಯದ ಕ್ಯಾಮೆರಾ ಎಗರಿಸಿದ ಖದೀಮರು.

ಮಾನ್ವಿ ಫೆ.21

ಸ್ವಂತಿಕೆ ದುಡಿಮೆ ಮಾಡಬೇಕೆಂದು ಹುಮಾಯೂನ್‌ ಎಂಬ ಮಾನ್ವಿಯ ಯುವಕ ಸಾಲ ಶೂಲ ಮಾಡಿ 4 ಲಕ್ಷ ಮೌಲ್ಯದ ವೀಡಿಯೋ ಕ್ಯಾಮೆರಾವನ್ನು ಖರೀದಿ ಮಾಡಿದ್ದಾನೆ. ಆದರೆ ಮದುವೆಯ ಪ್ರೀ ವೆಡ್ಡಿಂಗ್ ಶೂಟ್ ಮಾಡಿದರೆ ನಾಲ್ಕು ಕಾಸು ಬರುತ್ತದೆ ಎಂದು ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಫಾರೆಸ್ಟ್ ಬಳಿ ಕಾರಲ್ಲಿದ್ದ ಕ್ಯಾಮೆರಾವನ್ನು ಖದೀಮರು ಎಗರಿಸಿದ್ದು ನನಗೆ ನ್ಯಾಯಬೇಕು ಒದಗಿಸಿ ಕೊಡಬೇಕೆಂದು ಕೋರಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 11 ರಂದು ಗುಂಡಾ ಫಾರೆಸ್ಟ್ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಲು ತೆರಳಲಾಗಿತ್ತು. ಅಲ್ಲಿ ಶೂಟಿಂಗ್ ಮಾಡಿದ ನಂತರ ನಾಲ್ಕು ಲಕ್ಷ ಮೌಲ್ಯದ ವೀಡಿಯೋ ಕ್ಯಾಮೆರಾವನ್ನು ಕಾರಲ್ಲಿ ಇಡಲಾಗಿತ್ತು. ಆದರೆ ಕಳ್ಳರು ಹಿಂಬದಿಯ ಕಾರಿನ ಗ್ಲಾಸ್ ಹೊಡೆದು ಹಾಕಿ ಕ್ಯಾಮೆರಾ ಕದ್ದೊಯ್ದಿದ್ದಾರೆ.

ಈ ಸಂಬಂಧವಾಗಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ಫೆಬ್ರವರಿ 15 ರಂದು ಪ್ರಕರಣ ದಾಖಲಾಗಿದ್ದು, ನನಗೆ ಪೊಲೀಸ್ ಇಲಾಖೆಯ ಮೇಲೆ ಅಪಾರವಾದ ನಂಬಿಕೆ ಇದ್ದು, ಹೀಗಾಗಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ನನಗೆ ಕ್ಯಾಮೆರಾ ಹಿಂತಿರುಗಿಸುವ ಕೆಲಸ ಮಾಡಿ ಕೊಡಬೇಕೆಂದು ಹಗರಿಬೊಮ್ಮನಹಳ್ಳಿ ಪೊಲೀಸ್ ಸಿಬ್ಬಂದಿಗಳಲ್ಲಿ ಮಾಧ್ಯಮದ ಮೂಲಕ ವಿನಂತಿಸಿ ಕೊಂಡಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button