ಯಕ್ಕಂಚಿ ಗ್ರಾಮದ ಅಡವೇಶ್ವರ ಮಹಾರಾಜರ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಡಿಸಿಎಂ ಶಾಸಕರಾದ ಲಕ್ಷ್ಮಣ ಸಂ. ಸವದಿ.

ಅಥಣಿ ಫೆಬ್ರುವರಿ.4

ತಾಲೂಕಿನ ಸುಕ್ಷೇತ್ರ ಯಕ್ಕಂಚಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಶ್ರೀ ಸ.ಸ. ಅಡವೇಶ್ವರ ಮಹಾರಾಜರ 76.ನೇ ಪುಣ್ಯತಿಥಿ ಸಪ್ತಾಹದಲ್ಲಿ ಇಂದು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಪಾಲ್ಗೊಂಡು ಮಾತನಾಡಿದರು. ಶ್ರೀ ಅಡವೇಶ್ವರ ಮಹಾರಾಜರು ಹಾಗೂ ಇಂಚಗೇರಿ ಸಂಪ್ರದಾಯದ ಶರಣರು, ಸಂತರು, ಮಹಾತ್ಮರು ಅಧ್ಯಾತ್ಮದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದರು ಎಂದು ಸ್ಮರಿಸಿದರು.

ಸಪ್ತಾಹದಲ್ಲಿ ಗುರುಲಿಂಗ ಜಂಗಮ ಮಹಾರಾಜರು, ಮಹಾದೇವ ಮಹಾರಾಜರು, ಮಲ್ಲಯ್ಯ ಸ್ವಾಮಿಗಳು, ನಾರಾಯಣ ಮಹಾರಾಜರು, ಗುರುಪಾದ ಸ್ವಾಮೀಜಿ, ಕಲ್ಲಪ್ಪ ಮಹಾರಾಜರು, ಧರೆಪ್ಪ ಮಹಾರಾಜರು, ತಾರಾಚಂದ ಮಹಾರಾಜರು, ಅಡವಯ್ಯಾ ಕಾ. ಹಿರೇಮಠ, ಬಾಬುರಾವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಲವಾರು ಗಣ್ಯಮಾನ್ಯರು, ಯಕ್ಕಂಚಿ ಗ್ರಾಮದ ಮುಖಂಡರು, ಗ್ರಾಮಸ್ಥರು, ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button