ಡಿ.15 ರಂದು ಸಿ.ಎಂ ಸಿದ್ದರಾಮಯ್ಯ, ಸಚಿವರ ಆಗಮನ – ವಿವಿಧ ಸಮಿತಿಗಳ ರಚನೆ.

ರೋಣ ಡಿ.07

ಡಿ.15 ರಂದು ರೋಣ ಪಟ್ಟಣಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನಲೆ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಬೇಕು ಎನ್ನುವುದು ಬಹುತೇಕ ಖಚಿತವಾಗಿದೆ. ಶಾಸಕ ಜಿ.ಎಸ್ ಪಾಟೀಲ ಗುರುವಾರ ಬೆಳಿಗ್ಗೆ ರೋಣ ಹಾಗೂ ಗಜೇಂದ್ರಗಡ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಕ್ರೀಡಾಂಗಣಕ್ಕೆ ತೆರಳಿ ಸಮಾಲೋಚನೆ ನಡೆಸಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಸಮಾರಂಭ ನೆರವೇರಿಸಲು ಸೂಚಿಸಿದರು. ಈ ಮೊದಲು ಗುರುತಿಸಿದ್ದ ಜಾಗೆಯೂ ಬದಾಮಿ ರಸ್ತೆಗೆ ಹೊಂದಿ ಕೊಂಡಿದ್ದು. ಅಲ್ಲಿ ಸಮಾವೇಶ ನಡೆದರೆ ಸುಗಮ ಸಂಚಾರಕ್ಕೆ ತೊಂದರೆ ಯಾಗಬಹುದು ಎಂದು ಗುರುವಾರ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು. ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಗೆ ಸಿ.ಎಂ ಸಿದ್ದರಾಮಯ್ಯ ಸೇರಿದಂತೆ, ಸಚಿವರಾದ ಎಚ್.ಸಿ ಮಹದೇವಪ್ಪ, ಎಚ್.ಕೆ ಪಾಟೀಲ, ಸತೀಶ ಜಾರಕಿಹೊಳಿ. ಲಕ್ಷ್ಮೀ ಹೆಬ್ಬಾಕ್ಟರ್, ಕೃಷ್ಣ ಭೈರೇಗೌಡ, ಸಂತೋಷ ಲಾಡ್, ಶಿವರಾಜ್ ತಂಗಡಗಿ, ಶರಣಗೌಡ ಪಾಟೀಲ, ಆ‌ರ್.ಬಿ ತಿಮ್ಮಾಪೂರ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ. ಸಮಿತಿಗಳ ರಚನೆ ಕಾರ್ಯ ಶಾಸಕ ಜಿ.ಎಸ್ ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿದ್ದು, ಸಂಗನಗೌಡ ಪಾಟೀಲ ವಿ.ಬಿ ಸೋಮನಶೆಟ್ಟಿಮಠ, ಯೂಸುಪ್ ಇಟಗಿ, ಸಂಗು ನವಲಗುಂದ, ಶರಣ ಪ್ರಕಾಶ ಪಾಟೀಲ್, ಬಸವರಾಜ ನವಲಗುಂದ, ಶೇಪಿಕ್ ಮುಗನೂರು ಎಸ್.ಎಸ್ ಮಲ್ಲಿಕಾರ್ಜುನ, ಆನಂದ ಚಂಗಳಿ, ಸಂಜಯ ರೆಡ್ಡರ, ಯಲ್ಲಪ್ಪ ಕಿರೇಸೂರ, ಅಸ್ಲಂ ಕೊಪ್ಪಳ, ಮಲಿಕ ಯಲಿಗಾರ ತಹಶೀಲ್ದಾರ್ ನಾಗರಾಜ್.ಕೆ, ಎಇಇ ಬಲವಂತಪ್ಪ ನಾಯಕ, ಪಿಎಸಐ ಪ್ರಕಾಶ ಬಣಕಾರ, ವಿವಿಧ ಇಲಾಖೆಯ ಅಧಿಕಾರಿಗಳು.ಮುಖಂಡರು ಹಾಜರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button