ಅಂಬೇಡ್ಕರ್ ಗೆ ಅವಮಾನ ಕಲಬುರ್ಗಿ ಬಂದ.
ಕಲಬುರ್ಗಿ ಜನೇವರಿ.23

ನಿನ್ನೆ ರಾತ್ರಿ ಕಲಬುರಗಿಯ ಕ್ವಾಟನೂರ ನಗರದಲ್ಲಿ ಬಾಬ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಅವಮಾನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ,ಕಲಬುರಗಿ ನಗರದ ಹೀರಾಪೂರದಲ್ಲಿ ದಲಿತ ಮುಖಂಡರು ಮತ್ತು ಯುವಕರು ಘಟನೆಯನ್ನು ಖಂಡಿಸಿ ರಸ್ತೆಗಳನ್ನು ಸಂಪೂರ್ಣ ಬಂದ ಮಾಡಿ ಟೈರಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದರು,ಸಾರ್ವಜನಿಕರು ಬಂದನಿಂದ ಹೈರಾಣಾಗಿ ಹೊಗಿದ್ದು. ಕಾಲ ನಡಿಗೆಯಲ್ಲಿ ಜನ ಸಾಮಾನ್ಯರು ನಗರವನ್ನು ಪ್ರವೇಶಿಸಿದ್ದು ಕಂಡು ಬಂದಿದೆ,ಸದ್ಯ ನಗರದ ನಾಲ್ಕು ದಿಕ್ಕಿನಲ್ಲಿಯು ಸಂಪೂರ್ಣ ಬಂದ ಆಗಿದ್ದು ಖಾಸಗಿ ವಾಹನ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳ ಓಡಾಟ ಸ್ಥಗಿತವಾಗಿದೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ