ನಾಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಕೂಡ್ಲಿಗಿ ತಾಲೂಕಾ ಘಟಕ ದಿಂದ – ವಿಶ್ವ ಪತ್ರಿಕಾ ದಿನಾಚರಣೆ.
ಕೂಡ್ಲಿಗಿ ಜು.23

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ತಾಲೂಕಾ ಘಟಕ ಕೂಡ್ಲಿಗಿ ವತಿಯಿಂದ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಕ. ನಿ. ಪ.ಧ್ವನಿ ಸಂಘದ ಕಛೇರಿ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜ್ಞಾನ ಮಂಟಪ ಶಾಲೆ ಗುಂಡಿನ ಹೊಳೆ ನಡೆಯಲಿದ್ದು. ದಿವ್ಯ ಸಾನಿಧ್ಯ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ದಾಸೋಹ ಮಠ ಕಾನಮಡಗು. ಹಾಗೂ ಕಾರ್ಯಕ್ರಮದ ಉದ್ಘಾಟನೆ ಸನ್ಮಾನ್ಯ ಡಾ. ಎನ್. ಟಿ. ಶ್ರೀನಿವಾಸ್ ಶಾಸಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಜಿ ಉಮೇಶ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಂಸ್ಥಾಪಕರು ಹಾಗೂ ಅಧ್ಯಕ್ಷರು ಜ್ಞಾನ ಮಂಟಪ ಎಜುಕೇಶನ್ ಟ್ರಸ್ಟ್. ಅಧ್ಯಕ್ಷತೆ ತಾಲೂಕು ಘಟಕದ ಬಾಣದ ಶಿವಮೂರ್ತಿ, ವಿಶೇಷ ಉಪನ್ಯಾಸ ರೂಪ ಶಿಂತ್ರಿ, ಚಿಕ್ಕೋಡಿ, ಸೇರಿದಂತೆ ಕೂಡ್ಲಿಗಿ ತಾಲೂಕಿನ ಎಲ್ಲ ಜನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು, ಸುದ್ದಿ ಪತ್ರಿಕೆ ಓದುಗಾರರಿಗೆ, ಸುದ್ದಿ ಪತ್ರಿಕೆ ವಿತರಕರಿಗೆ ಸೇರಿದಂತೆ ಅನೇಕ ಸಾಧಕರಿಗೆ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಬಾಣದ ಶಿವಮೂರ್ತಿ ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.