ರಾಜ್ಯದೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಜೋರಾಗಿದ್ದು.
ಕೊಪ್ಪಳ ಆ.09

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮ ಸೇರಿದಂತೆ ರಾಜ್ಯದಾದ್ಯಂತ ಉತ್ತರ ಕರ್ನಾಟಕದಲ್ಲಿ ಸಂಭ್ರಮ ಸಡಗರ ದಿಂದ ಈ ನಾಗರ ಪಂಚಮಿ ಹಬ್ಬವನ್ನು ಹೆಚ್ಚಿನ ರೀತಿಯಲ್ಲಿ ಆಚರಿಸಲಾಯಿತು. ನಂತರ ಹಳ್ಳಿಯ ಮಹಿಳಾ ಭಕ್ತರು ತಮ್ಮ ಕುಟುಂಬದ ಸಮೇತವಾಗಿ ನಾಗರ ದೇವತೆಗೆ ತೆರಳಿ ನಾಗರ ಕಲ್ಲಿಗೆ ಪೂಜಿಸಿ ಹಾಲು-ತುಪ್ಪ ಸೀಯಾಳಾಭಿಷೇಕದ ತೀರ್ಥ ಸೇವೆಯನ್ನು ಮಾಡಿ ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥದ ಉಂಡಿ ಉಸುಳಿ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿ ಹಳ್ಳಿಯ ಭಕ್ತರು ಪುನೀತರಾದರು.

ಎಂದು ರೇಷ್ಮಾ ಪ್ರತಾಪ್ ಕಿಳ್ಳಿ ಹಾಗೂ ದುರಗವ್ವ ಹೇರೂರು ಇವರು ತಿಳಿಸಿದರು.ಈ ವೇಳೆಯಲ್ಲಿ ಮುಂತಾದ ಹಳ್ಳಿಯ ಕಡೆಗಳಲ್ಲಿ ಸಾವಿರಾರು ಭಕ್ತರು ನಾಗನಿಗೆ ತನು ಮನ ಅರ್ಪಿಸಿ ಕೃತಾರ್ಥರಾದರು. ಬಳಿಕ ನಾಗನಿಗೆ ಪೂಜಿಸಿದ ನಂತರ ಅರಿಶಿನ ಎಲೆಯ ಅರಿಶಿನ ದಾರವನ್ನು ಹಳ್ಳಿಯ ಜನರು ಕೈಯಿಗೆ ಕಟ್ಟಿಕೊಂಡು ಗ್ರಾಮಸ್ಥರು ಎಲ್ಲರೂ ಸಂಭ್ರಮ ಪಟ್ಟರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.