ಸಾತಿಹಾಳ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ – ಜಯಂತಿ ಆಚರಣೆ.
ಸಾತಿಹಾಳ ಏ.05

ದೇವರ ಹಿಪ್ಪರಗಿ ಸಮಾಜದಲ್ಲಿನ ಅಸ್ಪ್ರಶ್ಯತೆ ಜಾತಿ ವ್ಯವಸ್ಥೆ ತೊಡೆದು ಹಾಕಿ ಎಲ್ಲರಲ್ಲಿ ಸಮಾನತೆಗಾಗಿ ಹೋರಾಡಿದ ಡಾ, ಬಾಬು ಜಗಜೀವನ್ ರಾಮ 118 ನೇ. ಜನ್ಮದಿನ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ಯುವಕ ಸಂಘದಿಂದ ಆಚರಿಸಲಾಯಿತು. ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್, ಬಾಬು ಜಗಜೀವನ್ ರಾಮ್ ರವರು ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಅವರ ಜನ್ಮದಿನವನ್ನು ನಾವೆಲ್ಲರೂ ಸೇರಿಕೊಂಡು ಅರ್ಥ ಪೂರ್ಣವಾಗಿ ಹಮ್ಮಿಕೊಂಡು ಅವರ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು. ಇಂದಿನ ಯುವ ಪೀಳಿಗೆ ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಬಾಬು ಜಗಜೀವನ ರಾಮ್ ಯುವಕ ಸಂಘದ ಅಧ್ಯಕ್ಷರಾದ ರವಿ ಹಾದಿಮನಿ ಹೇಳಿದರು.ಕಾಲೋನಿಯಲ್ಲಿ ಇರುವ ಸರ್ಕಲನಲ್ಲಿ ಡಾಕ್ಟರ್, ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿಯ ನಮನಗಳು ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜು ಹಾದಿಮನಿ, ಅಡಿವೆಪ್ಪ ದೊಡಮನಿ, ದೇವು ಹಾದಿಮನಿ, ಪತ್ರಕರ್ತರಾದ ಮಹಾಂತೇಶ ಹಾದಿಮನಿ, ಮಂಜುನಾಥ ಹೊಸಮನಿ, ಗ್ರಾಪಂ. ಸದಸ್ಯರಾದ ಮಹಾಂತೇಶ ನಾಗರಬೆಟ್ಟ, ಶ್ರೀಶೈಲ ಹಾದಿಮನಿ, ಶಿವು ಹಾದಿಮನಿ, ಶಿವಶರಣ ದೊಡಮನಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಮಹಾಂತೇಶ.ಹಾದಿಮನಿ.ದೇವರ ಹಿಪ್ಪರಗಿ