ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ನಂದವಾಡಗಿ ಶಾಲಾ ಮಕ್ಕಳು.
ನಂದವಾಡಗಿ ಜು.13

ಬಾಗಲಕೋಟೆ ಜಿಲ್ಲೆಯ ಹುನಗುಂದ/ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ೨೦೨೪-೨೫ ನೇ. ಸಾಲಿನ ಶಾಲಾ ಸಂಸತ್ತಿಗೆ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿನಿಯರಲ್ಲಿ ಸಂವಿಧಾನದ ಆಶಯ, ಮೌಲ್ಯಗಳನ್ನು ಹಾಗೂ ಚುನಾವಣೆ ಪರಿಕಲ್ಪನೆ, ಅದರ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಈ ಒಂದು ಚುನಾವಣೆಯನ್ನು ಕೈಗೊಳ್ಳಲಾಯಿತು. ಚುನಾವಣೆಯ ಅಧಿಸೂಚನೆ ಪ್ರಕಟಣೆ, ಉಮೇದುವಾರರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಂತಿಮ ಉಮೇದುವಾರರ ಪ್ರಕಟ, ಚಿಹ್ನೆ ನೀಡುವುದು, ಮತದಾನ ಪ್ರಕ್ರಿಯೆ, ಬೆರಳಿಗೆ ಮಸಿ ಹಚ್ಚುವ ಪ್ರಕ್ರಿಯೆಯ ವರೆಗೆ ಯಶಸ್ವಿ ಚುನಾವಣೆಯನ್ನು ನೆರವೇರಿಸಲಾಯಿತು. ಹೀಗೆ ಹಲವು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಒಂದು ಚುನಾವಣೆಯಲ್ಲಿ ೨೦ ವಿದ್ಯಾರ್ಥಿನಿಯರು ನಾಮಪತ್ರ ಸಲ್ಲಿಸಿ, ಸ್ಪರ್ಧೆಯಲ್ಲಿ ಇದ್ದರು. ಅತ್ಯಂತ ಯಶಸ್ವಿಯಾಗಿ, ಅಚ್ಚು ಕಟ್ಟಾಗಿ ಚುನಾವಣೆ ಮಾಡುವುದರ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಗುರುತಿನ ಪತ್ರ ತೋರಿಸಿ, ಮತ ಹಾಕಿ ಸಂಭ್ರಮಿಸಿದರು. ಮತದಾನ ಪ್ರಕ್ರಿಯೆ ನಂತರ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ೯ ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾದರು. ಕುಮಾರಿ ಯಾಸ್ಮಿನ್ ಹೂಲಗೇರಿ, ಅಪೂರ್ವ ಕಟಗಿ, ಅನುಷಾ ಗುರಿಕಾರ, ಪೂಜಾ ಮ. ಗೌಡರ, ಹುಲಿಗೆಮ್ಮ ಮಾದರ, ಕೌಸರಬಾನು ಗುಡಿಹಾಳ, ಭೂಮಿಕಾ ಗೌಡರ, ಭಾಗ್ಯವಂತಿ ಕಾಜಗಾರ ಈ ಎಲ್ಲಾ ವಿದ್ಯಾರ್ಥಿನಿಯರು ಚುನಾಯಿತರಾದರು. ಶಾಲಾ ಸಂಸತ್ತಿನ ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಮತಗಟ್ಟೆ ಅಧಿಕಾರಿಯಾಗಿ ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಮತಗಟ್ಟೆ ಅಧಿಕಾರಿಯಾಗಿ ಶ್ರೀಮತಿ ಗಂಗಾ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರ ಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ ರವರು ಚುನಾವಣೆಯ ಸಂಪೂರ್ಣ ಕಾರ್ಯ ನಿರ್ವಹಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಚುನಾವಣಾಧಿಕಾರಿ ಅಭಿನಂದನೆ ಸಲ್ಲಿಸಿದರು. ಅತ್ಯುತ್ತಮವಾಗಿ ಚುನಾವಣೆ ಪ್ರಕ್ರಿಯೆ ನಡೆಸಿದ ಸರ್ವರಿಗೂ ಇಲಾಖಾಧಿಕಾರಿಗಳು ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಶಿಕ್ಷಕ ವೃಂದ, ಪಾಲಕರು, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ, ವಿದ್ಯಾರ್ಥಿನಿಯರು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿ ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.