“ಅವ್ಯವಸ್ಥೆಯ ಆಗರ ಆದ ಗೋಲಗೇರಿಯ ಆರೋಗ್ಯ ಕೇಂದ್ರ”.

ಗೋಲಗೇರಿ ಜನೇವರಿ.7

ಸಿಂದಗಿ ತಾಲೂಕಿನ ಗೋಲಗೇರಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಯಿಂದ ಹೂವಿನಹಳ್ಳಿ ರವರು ಕರ್ತವ್ಯಕ್ಕೆ ಹಾಜರಾಗದೆ ಅವರು ಸಂಬಳವನ್ನು ಪಡೆಯುತ್ತಿದ್ದಾರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು. ಕರ್ತವ್ಯದಿಂದ ವಜಾ ಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರಜಿಯಾಬೇಗಂ ಸೈಪನ್ ಸಾಬ್ ಕೋರ್ವಾರ್ ರವರಿಗೆ ಮನವಿ ಸಲ್ಲಿಸಿದ ಅವರು ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಮುಖಂಡರಾದ ಮೋದಿನ್ ಶಾಬಾದಿ, ಬಸನಗೌಡ ಪಾಟೀಲ್, ಶ್ರೀಶೈಲ್ ಜಾಲವಾದಿ, ಮಾತನಾಡಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಮುಖ್ಯ ವೈದ್ಯಧಿಕಾರಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಇನ್ನೂಳಿದ ಸಿಬ್ಬಂದಿಗಳು ಕೂಡ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ಮಧ್ಯಾಹ್ನ ಆಸ್ಪತ್ರೆ ಮುಚ್ಕೊಂಡು ತಮ್ಮ ಖಾಸಗಿ ಕೆಲಸಗಳಿಗೆ ಹೋಗುವುದು ಸಹಜ ರೂಢಿ ಪದ್ಧತಿಯಂತೆ ಆಸ್ಪತ್ರೆಯ ಆರೋಗ್ಯಗಳ ವಿಭಾಗ 24 ಗಂಟೆಗಳ ಕಾಲ ಕಾರ್ಯ ಪ್ರವೃತ್ತಾರಾಗಿರ ಬೇಕು ಆದರೆ 12:00 ಗಳ ಕಾಲ ಕೂಡ ಆಸ್ಪತ್ರೆಯಲ್ಲಿ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವೇ ಸ್ಪಂದಿಸಿ ವ್ಯವಸ್ಥೆಯನ್ನು ಸರಿ ಪಡಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರ ಪ್ರತಿ ನಿಧಿಯಾದ ಸೈಪನ್ ಕೊರ್ವಾರ್, ಮರಗೆಪ್ಪ ಕುದುರಗೊಂಡ, ರವಿ ಯಡ್ರಾಮಿ, ಸಿದ್ದು ಭಜಂತ್ರಿ, ಮಹಾಂತೇಶ್ ಗೊಂದಳಿ, ಶಾಹಿದ್ ಕ್ಯಾರೋಟಗಿ, ನಿಂಗಣ್ಣ ಚಲವಾದಿ, ಮಹದೇವಪ್ಪ ಭಜಂತ್ರಿ ಶಿವು ಚಿಕ್ ಸಿಂದಗಿ, ಸೇರಿದಂತೆ ಇತರರು ಹಾಜರಿದ್ದರು.

ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button