ಭಾರತವು ಶ್ರೇಷ್ಠ ಗುರುವಾಗಲಿ.

ಭಾರತೀಯರ ಕಣ್ಣಲ್ಲಿ ಸ್ವಾತಂತ್ರ್ಯ ಸಿರಿ
ಕಿರೀಟವಾಗಿದೆ ಹಿಮಾಲಯದ ಮಂಜು ಗಿರಿ
ತಾರತಮ್ಯವಿಲ್ಲದೆ ಎಲ್ಲರೊಳೊಬ್ಬನಾಗಿ ಬೆರಿ
ಬರುವ ಆಗಸ್ಟ್ 15 ಕ್ಕೆ ದೇಶದೆಲ್ಲೆಡೆ ತಿರಂಗ
ಹಾರಿಸಿರಿ
ಕಣ್ಣು ಕನಸು ಕಾಣುತಿದೆ ವಿಜೃಂಭಣೆಯ
ರಾಷ್ಟ್ರ ಹಬ್ಬಕ್ಕೆ
ಜೈ ಹಿಂದ್ ಮೊಳಗಲಿ ಕೇಳುವ ಹಾಗೆ ಆಕಾಶಕ್ಕೆ
ಸ್ವಾತಂತ್ರ್ಯದಿನ ಮೀಸಲಿರದಿರಲಿ ಕೇವಲ ಕ್ಷಣಕ್ಕೆ
ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸಬೇಡಿ
ಗೊಳ್ಳು ಭಾಷಣಕ್ಕೆ
ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗೆ
ಸಿಗಲಿ ಸ್ವಾತಂತ್ರ ವರದಕ್ಷಿಣೆ ಕೊಡುವ
ಹೆತ್ತವರಿಗೆ
ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ
ಒಳಗಾಗುವವರೆಗೆ
ಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ
ಹೆಣ್ಣು ಮಕ್ಕಳಿಗೆ
ಶ್ರೇಷ್ಠ ಪುಣ್ಯ ಭೂಮಿ ಇದು ಭಾರತವು
1947 ಆಗಸ್ಟ್ 15 ರಂದು ಪಡೆಯಿತು
ಸ್ವಾತಂತ್ರ್ಯವು
ಹೊಂದಿದೆ ಅತಿ ದೊಡ್ಡ ಲಿಖಿತ ಸಂವಿಧಾನವು
ಸಲ್ಲಿಸೋಣ ಭಾರತ ಮಾತೆಗೆ ನಿತ್ಯ
ನಮಸ್ಕಾರವು
ಭಾರತದ ವೈಭವ ಕೇಸರಿ ಬಿಳಿ ಹಸಿರು
ತಿರಂಗದಲಿ
ಭಾರತದ ಕನಸು ಪ್ರತಿ ಯುವಕನ ಕನಸಲಿ
ಪ್ರತಿಯೊಬ್ಬರೂ ಕೈಜೋಡಿಸಿ ಭಾರತ
ವಿಶ್ವಮಾನ್ಯ ಮಾಡುವಲಿ
ಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ
ಗುರುವಾಗಲಿ
ಶ್ರೀ ಮುತ್ತು.ಯ.ವಡ್ಡರಶಿಕ್ಷಕರು
ಬಾಗಲಕೋಟ
Mob-9845568484