ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕೊಟ್ಟಿದೆ – ಜಿ.ಎಚ್. ಶ್ರೀ ನಿವಾಸ್.

ತರೀಕೆರೆ ನವೆಂಬರ್.1

ಕನ್ನಡದಲ್ಲಿ ಮಾತನಾಡಿದರೆ ಭಾಷೆ ಉಳಿಯುತ್ತದೆ ಎಂದು ಶಾಸಕ ಜಿಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಪುರಸಭೆ ತರೀಕೆರೆ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರು ಜನ ಪ್ರತಿನಿಧಿಗಳು ಜನರೆಲ್ಲರೂ ಕನ್ನಡ ಮಾತನಾಡಿ ಭಾಷೆ ಉಳಿಸಬೇಕು.ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಶಿವರಾಂ ರವರು ಕನ್ನಡದಲ್ಲಿ ಪ್ರಥಮವಾಗಿ ಐಎಎಸ್ ಬರೆದು ಉತ್ತೀರ್ಣರಾದರು, ಆದರೆ ಕನ್ನಡ ಪರಿ ಪೂರ್ಣವಾಗಿ ಬಳಕೆಯಾಗುತ್ತಿಲ್ಲ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸೌಕರ್ಯಗಳು ಮತ್ತು ಉನ್ನತವಾದ ಶಿಕ್ಷಣ ತರಬೇತಿ ಪಡೆದ ಶಿಕ್ಷಕರು ಇರುವುದರಿಂದ ಹಾಗೂ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಮೊಟ್ಟೆ ಹಾಲು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮುಂದಿನ ಗುರಿಯನ್ನು ಇಟ್ಟುಕೊಂಡರೆ ಸಾಧನೆ ಮಾಡಲು ಸಾಧ್ಯ. ಜನರ ಕುಂದು ಕೊರತೆಗಳನ್ನು ಪರಿಹರಿಸಲು ವೆಬ್ಸೈಟ್ ಅನ್ನು ಉದ್ಘಾಟನೆ ಮಾಡಿದ್ದೇವೆ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ವೆಬ್ಸೈಟ್ ಮೂಲಕ ಬಳಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಧ್ವಜಾರೋಹಣ ಮಾಡಿ ಸಂದೇಶ ನೀಡಿದ ಉಪ ವಿಭಾಗ ಅಧಿಕಾರಿ ಡಾ. ಕೆ ಜೆ ಕಾಂತರಾಜ್ ಮಾತನಾಡಿ 2,000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ದೇಶಕ್ಕೆ ಅನುಭವ ಮಂಟಪದಿಂದ ಪಾರ್ಲಿಮೆಂಟ್ ಪರಿಕಲ್ಪನೆ ನೀಡಿದ್ದು ಕರುನಾಡು. ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಸ್ಥಾಪನೆಗೊಂಡು ಅನೇಕ ಕನ್ನಡ ಪರ ಹೋರಾಟಗಾರರ ಫಲದಿಂದ ಮೈಸೂರು ಪ್ರಾಂತ್ಯವನ್ನು ದಿವಂಗತ ದೇವರಾಜ ಅರಸು ರವರು ಮುಖ್ಯಮಂತ್ರಿಯಾದಾಗ ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಯುವಜನರು ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನಾವೆಲ್ಲರೂ ನಿರಂತರವಾಗಿ ಕನ್ನಡವನ್ನು ಬಳಸೋಣ ಉಳಿಸೋಣ ಬೆಳೆಸೋಣ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ಪರಮೇಶ್ ಮಾತನಾಡಿ ಜಾತಿ ಮತ ಧರ್ಮಗಳನ್ನು ಮೀರಿ ರಾಜ್ಯೋತ್ಸವ ಆಚರಿಸೋಣ, ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಿರಲಿ ಎಂದು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಡಿ ಎಸ್ ಪಿ, ಹಾಲುಮೂರ್ತಿರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ನವೀನ್ ಪೆನ್ನಯ್ಯ, ಇ ಒ,ಗೀತಾ ಶಂಕರ್, ಬಿ ಇ ಓ, ಗೋವಿಂದಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ದೈಹಿಕ ಶಿಕ್ಷಣ ಪರ್ವೀಕ್ಷಕರಾದ ಎಂ ಪ್ರಕಾಶ್, ಉಪಸ್ಥಿತರಿದ್ದು,ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ವಿ ಎಸ್ ರಾಜೀವ ಸ್ವಾಗತಿಸಿ ಶಿಕ್ಷಣ ಸಂಯೋಜಕ ಸತೀಶ್ ನಿರೂಪಿಸಿ, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್,ವೆಂಕಟೇಶ್. ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button