ಬೃಹತ್ ಜನಜಾಗೃತಿ ಪ್ರತಿಭಟನೆ.
ಬೆಂಗಳೂರು ಡಿಸೆಂಬರ್.27

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್ ( ಸಾದಹಳ್ಳಿ ಗೇಟ್ ) ಬಳಿಯಿಂದ ಕಬ್ಬನ್ ಪಾರ್ಕ್ ವರೆಗೂ ಬೃಹತ್ ಜನಜಾಗೃತಿ ಪ್ರತಿಭಟನೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಣಗೌಡರ ನೇತೃತ್ವದ ಅಡಿಯಲ್ಲಿ ಸಾವಿರಾರು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ, ಕನ್ನಡ ಬಳಸಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಅಂಗಡಿ ಮುಂಗಟ್ಟುಗಳ ಹೆಸರುಗಳು ಕನ್ನಡದಲ್ಲಿರಬೇಕು,

ಉದ್ಯಮಿಗಳೆ ವ್ಯಾಪಾರಸ್ಥರೆ ನಿಮಗಿದು ಕೊನೆ ಎಚ್ಚರಿಕೆ, ಎಂಬ ನಾಮ ಫಲಕಗಳೊಂದಿಗೆ ಕನ್ನಡದ ಬಾವುಟವನ್ನು ನೀಡಿದು ಘೋಷಣೆಗಳನ್ನು ಕೂಗುದರೊಂದಿಗೆ ಏರ್ಪೋರ್ಟಿನ ಪಕ್ಕದಲ್ಲಿರುವ ಬ್ಲೂಮ್ ಹೋಟಲ್ ಮುಂಭಾಗದಲ್ಲಿ ಆಂಗ್ಲ ಭಾಷೆಯಲ್ಲಿರುವಂತಹ ನಾಮಫಲಕವನ್ನು ಕರವೇ ಕಾರ್ಯಕರ್ತರಿಂದ ಕಿತ್ತೆಸೆದಿರುವ ದೃಶ್ಯ ಹಾಗೆ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಆಕ್ರೋಶಗಳನ್ನು ಹೊರ ಹಾಕಿರುವುದನ್ನು ನೋಡಬಹುದಾಗಿದೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ