ಕಲ್ಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ದಿಂದ ಮೇಲ್ಮಟ್ಟದಲ್ಲಿ ವಾರ್ಷಿಕ ವಿಶೇಷ ಶಿಬಿರ.

ಹೊಳೆ ಆಲೂರು ನ.11

ಸ್ಥಳೀಯ ಶ್ರೀ ಕಲ್ಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹೊಳೆ ಆಲೂರನಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ದತ್ತು ಗ್ರಾಮವಾದ ಮೇಲ್ಮಠ ದಲ್ಲಿ ಎರಡೇ ದಿನದಂದು ಕಾರ್ಯಕ್ರಮ ಜರುಗಿತು. ಮುಂಜಾನೆ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ ನಡೆದು ಮೇಲ್ಮಠದ ರೈತರು ತಮ್ಮ ಜಾನುವಾರುಗಳನ್ನು ಆರೋಗ್ಯ ತಪಾಸಣೆ ಮಾಡಿದರು, ಮತ್ತೆ ಸಾಯಂಕಾಲದಲ್ಲಿ ಕಾರ್ಯಕ್ರಮವು ನೇರೆವೇರಿತು ಈ ಕಾರ್ಯಕ್ರಮದಲ್ಲಿ ಗಣ ಅಧ್ಯಕ್ಷತೆಯನ್ನು ಶ್ರೀ ಆರ್.ಬಿ ದೊಡ್ಡಮನಿ ಉಪನ್ಯಾಸಕರು ವಹಿಸಿದ್ದರು ಇನ್ನು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶ್ರೀ ಎಂ.ಎಸ್ ಬೇವೂರ, ಉಪನ್ಯಾಸಕರು ಶ್ರೀ ಕಲ್ಮೇಶ್ವರ ಪದವಿ ಮಹಾವಿದ್ಯಾಲಯ ಹೊಳೆ ಆಲೂರ, ವಿಷಯ “ಶರಣರ ವಚನಗಳಲ್ಲಿ ಕಾಯಕ ದಾಸೋಹ “ಎಂಬ ವಿಷಯವನ್ನು ಉಪನ್ಯಾಸ ಮಾಡಿ, ಮನುಷ್ಯ ಕಾಯಕದಲ್ಲಿ ದಾಸೋಹಿ ಯಾಗಬೇಕು ವಿಭೂತಿ ಮಹಿಮೆ ಶರಣರಿಂದ ಅವರ ವಚನಗಳ ಇಂದಿನ ಜನಕ್ಕೆ ಮಾದರಿ ಎಂದರು.

ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಾಯ್,ವ್ಹಿ ಗಾಣಿಗೇರ ನಿವೃತ್ತ ಮುಖ್ಯೋಪಾಧ್ಯಾಯರು ಬಾಗವಹಿಸಿ, ಶಿಬಿರಾರ್ಥಿಗಳು ಕುರಿತು ಮಾತಮಾಡಿದರು. ಇನ್ನು ಶ್ರೀ ಮಾಹಾಂತೇಶಗೌಡ ರಾ ಕರಕನಗೌಡ್ರ, ಶ್ರೀ ಹನಮಪ್ಪ ಭೀ ಕರಮುಡಿ, ಶ್ರೀ ರುದ್ರಯ್ಯ ಪ ರಟ್ಟಿಹಳ್ಳಿ, ಶ್ರೀ ಶಂಕ್ರಪ್ಪ ರಾ ಪೂಜಾರ, ಶ್ರೀ ಪ್ರಕಾಶ ರಾ ಪೂಜಾರ, ಶ್ರೀ ಹನಮಪ್ಪ ಮು ಕುರಿ ಶ್ರೀ ಎಂ ಆರ್ ಉಂಡಿ ಉಪನ್ಯಾಸಕರು ಮುಂತಾದವರು ಭಾಗವಹಿಸಿದ್ದರು ಇನ್ನು ಕೊನೆಯಲ್ಲಿ ಅಧ್ಯಕ್ಷಿಯ ಬಾಷಣವನ್ನು ಆರ್.ಬಿ ದೊಡ್ಡಮನಿ ಅವರು ಎಲ್ಲರಿಗೂ ವಂದಿಸಿದರು, ಕಾರ್ಯಕ್ರಮದ ಎಲ್ಲಾ ನಿರ್ವಹಣೆಯನ್ನು ಶಿಬಿರಾರ್ಥಿಗಳು ಮಾಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button